<p><strong>ಬೆಂಗಳೂರು: </strong>ಎಳನೀರು ಕುಡಿದ ವ್ಯಕ್ತಿಯೊಬ್ಬರು ನೀಡಿದ ₹ 2,000 ನೋಟಿಗೆ ಚಿಲ್ಲರೆ ಸಿಗದೇ ಮಾರಾಟಗಾರ ಪರದಾಡಿದ ಪ್ರಸಂಗವೊಂದು ಮಂಗಳವಾರ ಇಲ್ಲಿ ನಡೆದಿದೆ.</p>.<p>ನಗರದ ಮಲ್ಲೇಶ್ವರಂ ರೈಲು ನಿಲ್ದಾಣದ ಬಳಿ ತಳ್ಳುಗಾಡಿಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ನಂಜಪ್ಪ ಬಳಿ ಮಂಗಳವಾರ ಬೆಳಿಗ್ಗೆ ಎಳನೀರು ಕುಡಿದ ಗ್ರಾಹಕನೊಬ್ಬ ₹ 2,000 ನೋಟು ನೀಡಿದ!</p>.<p>‘ಕುಡಿದದ್ದು ₹20 ಎಳನೀರು, ನೀಡಿದ್ದು ₹2000 ನೋಟು! ಚಿಲ್ಲರೆ ಎಲ್ಲಿಂದ ತರಲಿ ಸ್ವಾಮಿ? ಚಿಲ್ಲರೆ ಇದ್ದರೆ ಕೊಡಿ’ ಎಂದು ನಂಜಪ್ಪ ಕೇಳಿದ. ಜೇಬುಗಳನ್ನು ತಡಕಾಡಿದ ಗ್ರಾಹಕ ‘ನನ್ನ ಬಳಿ ₹ 2,000 ನೋಟು ಬಿಟ್ಟರೆ ಬಿಡಿಗಾಸೂ ಇಲ್ಲ. ಮೇಲಾಗಿ ನನಗೆ ಇಲ್ಲಿ ಯಾರ ಪರಿಚಯವೂ ಇಲ್ಲದ ಕಾರಣ ಚಿಲ್ಲರೆ ಸಿಗುವುದೂ ಕಷ್ಟ’ ಎಂದ. ಚಿಲ್ಲರೆ ಹುಡುಕುವ ಹೊಣೆ ಎಳನೀರು ಮಾರಾಟಗಾರ ನಂಜಪ್ಪನ ಹೆಗಲೇರಿತು.</p>.<p>ವ್ಯಾಪಾರ ಬಿಟ್ಟು ಚಿಲ್ಲರೆಗಾಗಿ ಅಲೆದು ಸುಸ್ತಾದ ನಂಜಪ್ಪ ಎದುರಿಗೆ ಸಿಕ್ಕವರ ಬಳಿ ಚಿಲ್ಲರೆ ನೀಡುವಂತೆ ಕೇಳುತ್ತಿದ್ದ. ‘ಒಂದು ವಾರದಿಂದ ವ್ಯಾಪಾರ ಇಲ್ಲ. ದಿನವಿಡಿ ಎಳನೀರು ಮಾರಾಟ ಮಾಡಿದರೂ ₹ 2,000 ಸಿಗುವುದಿಲ್ಲ. ಅಂತಹ ಸ್ಥಿತಿಯಲ್ಲಿ ₹20 ಎಳನೀರಿಗೆ ಇಷ್ಟೊಂದು ದೊಡ್ಡ ನೋಟು ನೀಡಿದರೆ ಹೇಗೆ ಸ್ವಾಮಿ? ನಾನು ಬಡವ’ ಎಂದು ಅಲವತ್ತುಕೊಂಡಿದ್ದೂ ಆಯಿತು.</p>.<p>ನಂಜಪ್ಪನಿಗೆ ಎಳನೀರಿನ ₹20 ಕೈತಪ್ಪುತ್ತದೆ ಎನ್ನುವ ಚಿಂತೆಯಾದರೆ. ಎಳನೀರು ಕುಡಿದ ವ್ಯಕ್ತಿ ₹2,000 ಬಿಟ್ಟು ಕದಲುತ್ತಲೇ ಇಲ್ಲ. ಎರಡು ತಾಸು ಕಾಯ್ದರೂ ₹2,000 ನೋಟಿಗೆ ಚಿಲ್ಲರೆ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಜನರ ದೊಡ್ಡ ದಂಡು ಅಲ್ಲಿ ಸೇರಿತ್ತು.</p>.<p>‘ಎಳನೀರು ಮಾರಾಟಗಾರ ಇಲ್ಲಿಯೇ ಇರುತ್ತಾನೆ. ಆತನಿಗೆ ₹20 ತಂದು ಕೊಟ್ಟು ₹2,000 ನೋಟು ತೆಗೆದುಕೊಂಡು ಹೋಗಿ’ ಎಂದು ನ್ಯಾಯ ಇತ್ಯರ್ಥ ಪಡಿಸಿದರು.</p>.<p>ನಂಜಪ್ಪನ ಪರಿಚಯದ ಸ್ಥಳೀಯ ಪಾನ್ಬೀಡಾ ಅಂಗಡಿಯ ಮಾಲೀಕ ಮಧ್ಯಸ್ಥಿಕೆವಹಿಸಿ ಗ್ರಾಹಕನ ಮನವೊಲಿಸಿ, ಚಿಲ್ಲರೆ ತಂದು ₹ 2,000 ನೋಟು ಪಡೆಯುವಂತೆ ಸಲಹೆ ನೀಡಿ ಕಳಿಸಿದ. </p>.<p>₹ 20 ಬರುವವರೆಗೆ ನಂಜಪ್ಪ ತಾತ್ಕಾಲಿಕವಾಗಿ ₹ 2,000 ನೋಟಿನ ಒಡೆಯನಾದ ಖುಷಿಯಲ್ಲಿ ಕೈಯಲ್ಲಿ ನೋಟು ಹಿಡಿದು ಮೊಬೈಲ್ಗೆ ಪೋಸು ನೀಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎಳನೀರು ಕುಡಿದ ವ್ಯಕ್ತಿಯೊಬ್ಬರು ನೀಡಿದ ₹ 2,000 ನೋಟಿಗೆ ಚಿಲ್ಲರೆ ಸಿಗದೇ ಮಾರಾಟಗಾರ ಪರದಾಡಿದ ಪ್ರಸಂಗವೊಂದು ಮಂಗಳವಾರ ಇಲ್ಲಿ ನಡೆದಿದೆ.</p>.<p>ನಗರದ ಮಲ್ಲೇಶ್ವರಂ ರೈಲು ನಿಲ್ದಾಣದ ಬಳಿ ತಳ್ಳುಗಾಡಿಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ನಂಜಪ್ಪ ಬಳಿ ಮಂಗಳವಾರ ಬೆಳಿಗ್ಗೆ ಎಳನೀರು ಕುಡಿದ ಗ್ರಾಹಕನೊಬ್ಬ ₹ 2,000 ನೋಟು ನೀಡಿದ!</p>.<p>‘ಕುಡಿದದ್ದು ₹20 ಎಳನೀರು, ನೀಡಿದ್ದು ₹2000 ನೋಟು! ಚಿಲ್ಲರೆ ಎಲ್ಲಿಂದ ತರಲಿ ಸ್ವಾಮಿ? ಚಿಲ್ಲರೆ ಇದ್ದರೆ ಕೊಡಿ’ ಎಂದು ನಂಜಪ್ಪ ಕೇಳಿದ. ಜೇಬುಗಳನ್ನು ತಡಕಾಡಿದ ಗ್ರಾಹಕ ‘ನನ್ನ ಬಳಿ ₹ 2,000 ನೋಟು ಬಿಟ್ಟರೆ ಬಿಡಿಗಾಸೂ ಇಲ್ಲ. ಮೇಲಾಗಿ ನನಗೆ ಇಲ್ಲಿ ಯಾರ ಪರಿಚಯವೂ ಇಲ್ಲದ ಕಾರಣ ಚಿಲ್ಲರೆ ಸಿಗುವುದೂ ಕಷ್ಟ’ ಎಂದ. ಚಿಲ್ಲರೆ ಹುಡುಕುವ ಹೊಣೆ ಎಳನೀರು ಮಾರಾಟಗಾರ ನಂಜಪ್ಪನ ಹೆಗಲೇರಿತು.</p>.<p>ವ್ಯಾಪಾರ ಬಿಟ್ಟು ಚಿಲ್ಲರೆಗಾಗಿ ಅಲೆದು ಸುಸ್ತಾದ ನಂಜಪ್ಪ ಎದುರಿಗೆ ಸಿಕ್ಕವರ ಬಳಿ ಚಿಲ್ಲರೆ ನೀಡುವಂತೆ ಕೇಳುತ್ತಿದ್ದ. ‘ಒಂದು ವಾರದಿಂದ ವ್ಯಾಪಾರ ಇಲ್ಲ. ದಿನವಿಡಿ ಎಳನೀರು ಮಾರಾಟ ಮಾಡಿದರೂ ₹ 2,000 ಸಿಗುವುದಿಲ್ಲ. ಅಂತಹ ಸ್ಥಿತಿಯಲ್ಲಿ ₹20 ಎಳನೀರಿಗೆ ಇಷ್ಟೊಂದು ದೊಡ್ಡ ನೋಟು ನೀಡಿದರೆ ಹೇಗೆ ಸ್ವಾಮಿ? ನಾನು ಬಡವ’ ಎಂದು ಅಲವತ್ತುಕೊಂಡಿದ್ದೂ ಆಯಿತು.</p>.<p>ನಂಜಪ್ಪನಿಗೆ ಎಳನೀರಿನ ₹20 ಕೈತಪ್ಪುತ್ತದೆ ಎನ್ನುವ ಚಿಂತೆಯಾದರೆ. ಎಳನೀರು ಕುಡಿದ ವ್ಯಕ್ತಿ ₹2,000 ಬಿಟ್ಟು ಕದಲುತ್ತಲೇ ಇಲ್ಲ. ಎರಡು ತಾಸು ಕಾಯ್ದರೂ ₹2,000 ನೋಟಿಗೆ ಚಿಲ್ಲರೆ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಜನರ ದೊಡ್ಡ ದಂಡು ಅಲ್ಲಿ ಸೇರಿತ್ತು.</p>.<p>‘ಎಳನೀರು ಮಾರಾಟಗಾರ ಇಲ್ಲಿಯೇ ಇರುತ್ತಾನೆ. ಆತನಿಗೆ ₹20 ತಂದು ಕೊಟ್ಟು ₹2,000 ನೋಟು ತೆಗೆದುಕೊಂಡು ಹೋಗಿ’ ಎಂದು ನ್ಯಾಯ ಇತ್ಯರ್ಥ ಪಡಿಸಿದರು.</p>.<p>ನಂಜಪ್ಪನ ಪರಿಚಯದ ಸ್ಥಳೀಯ ಪಾನ್ಬೀಡಾ ಅಂಗಡಿಯ ಮಾಲೀಕ ಮಧ್ಯಸ್ಥಿಕೆವಹಿಸಿ ಗ್ರಾಹಕನ ಮನವೊಲಿಸಿ, ಚಿಲ್ಲರೆ ತಂದು ₹ 2,000 ನೋಟು ಪಡೆಯುವಂತೆ ಸಲಹೆ ನೀಡಿ ಕಳಿಸಿದ. </p>.<p>₹ 20 ಬರುವವರೆಗೆ ನಂಜಪ್ಪ ತಾತ್ಕಾಲಿಕವಾಗಿ ₹ 2,000 ನೋಟಿನ ಒಡೆಯನಾದ ಖುಷಿಯಲ್ಲಿ ಕೈಯಲ್ಲಿ ನೋಟು ಹಿಡಿದು ಮೊಬೈಲ್ಗೆ ಪೋಸು ನೀಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>