‘ರಾಜ್ ಕುಟುಂಬ ಗಾಜನೂರಿನ ಮನೆಯಲ್ಲಿದ್ದಾಗ ವೀರಪ್ಪನ್ ಮೂವರು ಸಹಚರರೊಂದಿಗೆ ಬಂದು ಬಂದೂಕು ತೋರಿಸಿದ್ದ. ನನ್ನೊಂದಿಗೆ ಬನ್ನಿ ಎಂದು ಆತ ಹೇಳಿದಾಗ, ಆ ಪುಣ್ಯಾತ್ಮ, ‘ನಡೆಯಿರಿ’ ಎಂದು ಹೆಜ್ಜೆ ಹಾಕಿದ್ದರು. ಎಲ್ಲಿಗೆ, ಏನು, ಏಕೆ ಎಂದು ಪ್ರಶ್ನಿಸಲಿಲ್ಲ. ಅವರು ಪ್ರತಿರೋಧ ಒಡ್ಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ತಿಳಿಯದು. ಅವರ ಸಮಯಪ್ರಜ್ಞೆ ಮೆಚ್ಚುವಂತಹದ್ದು’ ಎಂದು ಎಸ್.ಎಂ.ಕೃಷ್ಣ ಹೇಳಿದರು.