ಮೈಸೂರು: ನಾಟಕ ನೋಡಲು ಬಂದವರನ್ನು ಭಾಷಣ ಕೇಳಲು ಕರೆತಂದರೆ? ಹಾಗೆ ಬಂದವರನ್ನು ದಬಾಯಿಸಿ ವಾಪಸು ಕರೆಸಿಕೊಂಡರೆ ಹೇಗಿರುತ್ತದೆ? ಇಂಥದ್ದೊಂದು ಘಟನೆ ಇಲ್ಲಿನ ಕಲಾಮಂದಿರದ ‘ಮನೆಯಂಗಳ’ದಲ್ಲಿ ನಡೆಯಿತು.
ಅದು ಕನಕದಾಸರ ಜಯಂತಿ ಸಮಾರಂಭ. ಉದ್ಘಾಟಕರಾಗಿದ್ದ ಸಾಹಿತಿ ಕೆ.ಎಸ್.ಭಗವಾನ್ ಹಾಗೂ ಇತರ ಅತಿಥಿಗಳು ಅದಾಗಲೇ ಬಂದು ಕುಳಿತಿದ್ದರು. ಆದರೆ, ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ದರು. ಕಾರ್ಯಕ್ರಮ ಆಯೋಜಿಸಿದ್ದ ‘ಕನ್ನಡ ಕಂದ’ ಅವರು ಕಲಾಮಂದಿರದತ್ತ ಹೋಗಿ, ಅಲ್ಲಿ ಪೌರಾಣಿಕ ನಾಟಕ ನೋಡಲು ಬಂದಿದ್ದ ಗ್ರಾಮೀಣ ಜನರನ್ನು ‘ಮನೆಯಂಗಳ’ಕ್ಕೆ ಕರೆತಂದರು.