ಚೆನ್ನೈ: ಹೃದಯ ಸ್ತಂಭನದಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಸುದ್ದಿ ಕೇಳಿ ಎಐಎಡಿಎಂಕೆ ಕಾರ್ಯಕರ್ತರಿಬ್ಬರು ಸಾವಿಗೀಡಾಗಿದ್ದಾರೆ.
ಕೊಯಂಬತ್ತೂರಿನ ಎನ್ಜಿಒ ಕಾಲನಿಯ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪಳನಿಯಮ್ಮಾಳ್ ಎಂಬವರು ಸ್ಟ್ರೋಕ್ನಿಂದ ಸೋಮವಾರ ಮಧ್ಯಾಹ್ನ ಅಸು ನೀಗಿದ್ದಾರೆ.
ನಿನ್ನೆ ರಾತ್ರಿ ಜಯಾ ಅವರಿಗೆ ಹೃದಯಸ್ತಂಭನ ಆಗಿದೆ ಎಂಬ ಸುದ್ದಿಯನ್ನು ವೀಕ್ಷಿಸಿದ 47ರ ಹರೆಯದ ಕಡಲೂರು ಜಿಲ್ಲೆಯ ಎಐಎಡಿಎಂಕೆ ಕಾರ್ಯಕರ್ತ ನೀಲಕಂಠನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು.