ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್‌ ಸುಭಾಷ್‌ ಕೃತ್ಯ: ಮುಲಾಲಿ ಮೃದುಧೋರಣೆ!

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ADVERTISEMENT

ಬಳ್ಳಾರಿ: ‘ಮೀಡಿಯಾದಾಗೇನಾದ್ರೂ ಬಂದ್ರೆ ನಾನ್‌ ತಲೆ ಬೋಳಿಸ್ಕೊಂಡು ಬಾಗಲಕೋಟೇಲಿ ಓಡಾಡ್ತೀನಿ ಆಯ್ತ? ಕೂಲಾಗಿರಿ, ನಥಿಂಗ್‌ ವಿಲ್‌ ಹ್ಯಾಪನ್‌. ನಿಮಗೆ, ನಿಮ್ಮ ಕುಟುಂಬಕ್ಕೆ ಏನಾದರೂ ಆದರೆ ನಾನವರನ್ನು ಸುಮ್ಮನೇ ಬಿಡುವುದಿಲ್ಲ’

ರಾಸಲೀಲೆ ಹೆಸರಿನಲ್ಲಿ ಜಾಹೀರಾಗಿರುವ ಮಾಜಿ ಸಚಿವ ಎಚ್‌.ವೈ.ಮೇಟಿ ಅವರ ಲೈಂಗಿಕ ದೃಶ್ಯಾವಳಿ ಪ್ರಕರಣ ಮೊದಲು ಸುದ್ದಿಯಾಗಲು ಕಾರಣರಾದ ಇಲ್ಲಿನ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಲಾಲಿ, ಪ್ರಕರಣದ ಮತ್ತೊಬ್ಬ ಕೇಂದ್ರ ವ್ಯಕ್ತಿಯಾದ ಬಾಗಲಕೋಟೆಯ ಜಿಲ್ಲಾ ಸಶಸ್ತ್ರ ಪಡೆಯ ಕಾನ್‌ಸ್ಟೆಬಲ್‌ ಸುಭಾಷ್‌ಗೆ ನೀಡಿದ್ದ ಭರವಸೆ ಇದು.

ವಿಡಿಯೊ ದೃಶ್ಯಾವಳಿಗಳು ಜಾಹೀರಾಗಬಾರದು ಎಂದು ಮುಲಾಲಿ ಹಾಗೂ ಸುಭಾಷ್‌ ಬಯಸಿದ್ದರು. ಅದನ್ನು ಜಾಹೀರು ಮಾಡುವುದಿಲ್ಲ ಎಂದೂ ಮುಲಾಲಿ ಭರವಸೆ ನೀಡಿದ್ದರು. ಇವರಿಬ್ಬರ ನಡುವೆ ದೃಶ್ಯವಾಹಿನಿ ಯೊಂದರ ಬಳ್ಳಾರಿ ವರದಿಗಾರರೂ ಸಂವಹನಕಾರರಾಗಿದ್ದರು!

ಸುಭಾಷ್ ಜೊತೆ ಮುಲಾಲಿ ದೂರವಾಣಿ ಮೂಲಕ ನಡೆಸಿದ್ದಾರೆ ಎನ್ನಲಾಗಿರುವ ಸಂಭಾಷಣೆಯು, ಲೈಂಗಿಕ ದೃಶ್ಯಾವಳಿಗಳನ್ನು ಬಳಸಿಕೊಂಡು ಸಚಿವರಿಂದ ಸುಭಾಷ್‌ ‘ಹಣ ಪಡೆಯುವ’ ಮತ್ತು ‘ಮೇಡಂ ಒಬ್ಬರ  ಮರು ನೇಮಕಾತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ’ ಕುರಿತ ಉದ್ದೇಶವನ್ನೂ ಹೇಳುತ್ತದೆ. ಸುಭಾಷ್‌ ಮತ್ತು ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಚಿಂತಿಸಿದ್ದರು ಎಂಬ ಕಡೆಗೂ ಗಮನ ಸೆಳೆಯುತ್ತದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಸಲುವಾಗಿಯೇ ಅಣ್ಣಾ ಫೌಂಡೇಷನ್‌ ಸ್ಥಾಪಿಸಿರುವ ಮುಲಾಲಿ, ‘ಸಚಿವರಿಂದ ಹಣ ಪಡೆಯುವ ನಿಮ್ಮ ಉದ್ದೇಶಕ್ಕೆ ತೊಂದರೆ ಉಂಟು ಮಾಡುವುದಿಲ್ಲ. ನಿಮ್ಮ ಬೇಡಿಕೆ ನೀವು ತೀರಿಸಿಕೊಳ್ಳಿ’ ಎನ್ನುತ್ತಾರೆ!

ತಮಗೆ ಮಾಹಿತಿ ನೀಡದೆ ಬಳ್ಳಾರಿಗೆ ಬಂದ ಸುಭಾಷ್‌ ಜೊತೆ ಮುಲಾಲಿ ನಡೆಸಿದ 27 ನಿಮಿಷ 32 ಸೆಕೆಂಡ್‌ ಅವಧಿಯ ಸಂಭಾಷಣೆಯ ಧ್ವನಿಮುದ್ರಿಕೆ ‘ಪ್ರಜಾವಾಣಿ’ ಬಳಿ ಇದೆ.
‘ವಿಜಯಲಕ್ಷ್ಮಿ ಮತ್ತು ನೀವು ಸೇರಿ ಯಾಕೆ ಆಪರೇಟ್‌ ಮಾಡಿದಿರಿ ಎಂದು ನನ್ನ ಹತ್ರ ಹೇಳಿದಿರಿ. ಹೌದಾ? ನಮ್ಮ ಕಡೆಯಿಂದ ನಿಮಗೆ ಏನು ಬೇಕೋ ಸಹಾಯ ಮಾಡ್ತೀವಿ. ಆದರೆ ಇಂಥ ರಾಜಕಾರಣಿಗಳು ಇರಬಾರದು ಎಂದು ಹೇಳಿದೆ ಹೌದಾ?’ ಎನ್ನುವ ಮೂಲಕ ಸುಭಾಷ್‌ ಅವರ ಕುರಿತು ಮುಲಾಲಿ ಮೃದು ಧೋರಣೆಯನ್ನು ಪ್ರಕಟಿಸುತ್ತಾರೆ.

ಬಹಿರಂಗಗೊಳ್ಳುವ ಭಯ: ವಿಡಿಯೊ ದೃಶ್ಯಾವಳಿಗಳ ಕುರಿತು ಮುಲಾಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂಬ ಊಹಾಪೋಹ ಕುರಿತು ಮುಲಾಲಿ ಅವರಿಂದ ಸುಭಾಷ್‌ ಸ್ಪಷ್ಟನೆ ಕೋರುತ್ತಾರೆ. ‘ಹಾಗೆ ಆಗುವುದಿಲ್ಲ’ ಎಂದು ಮುಲಾಲಿ ಭರವಸೆ ನೀಡುತ್ತಾರೆ.

‘ಈಗ ಅವ್ರು ನಿಮ್‌ ಬೇಡಿಕೆ ಈಡೇರಿಸ್ತಿನಿ ಅಂದಿದಾರಾ? ನಿಮ್ದು ನೀವು ಇಸ್ಕೋತೀರಾ?’, ‘ಎಷ್ಟು ಕೇಳ್ತೀರಿ, ಹೆಂಗ್‌ ಕೊಡ್ತಾರ್ ಅವ್ರು, ನೀವು ಎಲ್ಲಿ ಇಟ್ಕೊಂತೀರಿ. ಇವತ್ತಿನ ಪರಿಸ್ಥಿತಿ ನಿಮಗೆ ಗೊತ್ತಿದೆ ಅಲ್ವಾ ಸುಭಾಷ್‌. ಹತ್‌ ಲಕ್ಷ ಕೊಟ್ರೆ ಕೂಡ ರೈಡ್‌ ಆಗ್ತಾ ಇದೆ. ಎಷ್ಟು ಅಮೌಂಟ್‌ ಕೇಳ್ಬೇಕು ಅನ್ಕೊಂಡಿದ್ದೀರಿ, ಅವತ್‌ ಕೇಳಿದ್ದಷ್ಟೇನಾ? ಇನ್ನು ಏನಾದ್ರೂ ಹೆಚ್ಚಾ, ಕಡಿಮೆ ಆಗಿದೆಯಾ? ಈಗ ಹೆಂಗಿದೆ ರೇಟು? ಎಲ್ಲಿ ಇಸ್ಕೊಂತೀರಿ ನೀವು?’ ಎಂದೂ ಮುಲಾಲಿ ಕೇಳುತ್ತಾರೆ. ಜೊತೆಗೆ ‘ನನ್ನ ಬೇಡಿಕೆ ಏನೂ ಇಲ್ಲ’ ಎಂದು ಪದೇಪದೇ ಹೇಳುತ್ತಾರೆ!

ಮೇಟಿ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡುವ ಸುಭಾಷ್‌ ಅವರ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಅವರ ಈ ಮಾತುಗಳು ಮುಂದುವರಿಯುತ್ತವೆ.
‘ಮೇಟಿ ಅವರ ಮಗನೇ ಬರ್ತಾರೆ ದುಡ್ಡು ಕೊಡೋಕೆ’ ಎಂದು ಸುಭಾಷ್‌ ತಿಳಿಸುತ್ತಾರೆ,  ‘ಬೇಡಿಕೆ ಕೇಳ್ತೀರಾ ಅಂತಿಟ್ಕೊಳ್ಳಿ, ಬ್ಲ್ಯಾಕ್‌ಮೇಲ್‌ ಕೇಸಲ್ಲಿ ಫಿಟ್‌ ಮಾಡಿದ್ರೆ ನಿಮ್ಮನ್ನ? ನಮ್ಮನ್ನ? ’ ಎಂದೂ ಮುಲಾಲಿ ಕೇಳುತ್ತಾರೆ.

ರೆಕಾರ್ಡ್‌ ಆಗುವ ಭಯ: ಸುಭಾಷ್‌ ಜೊತೆಗೆ ಮಾತನಾಡುವಾಗ ಹಲವು ಬಾರಿ ಮುಲಾಲಿ ಅವರು, ತಮ್ಮ ಮಾತುಗಳು ಎಲ್ಲಿಯೂ ರೆಕಾರ್ಡ್‌ ಆಗಬಾರದು ಎಂದೂ ತಾಕೀತು ಮಾಡುತ್ತಾರೆ. ಒಮ್ಮೆ ಬಹುವಚನದಲ್ಲಿ, ಕೆಲವೊಮ್ಮೆ ಏಕವಚನದಲ್ಲಿ ಸುಭಾಷ್‌ ಅವರನ್ನು ಸಂಬೋಧಿಸುತ್ತಾರೆ.
‘ಮೇಟಿ ಅವರೊಂದಿಗೆ ಒಮ್ಮೆ ಮಾತನಾಡಿ’ ಎಂದು ದುಂಬಾಲು ಬೀಳುವ ಸುಭಾಷ್‌ ಮಾತಿಗೆ ಮುಲಾಲಿ ಅವರು, ‘ನೀವೇ ಅವರಲ್ಲಿಗೆ ಹೋಗಿ ನಿಮ್ಮ ಫೋನ್‌ ಮಾಡಿ ಕೊಡಿ. ಬೇರೆಯವರ ಫೋನ್‌ನಲ್ಲಿ ಮಾತನಾಡಲ್ಲ’ ಎನ್ನುತ್ತಾರೆ.

ಒರಿಜಿನಲ್‌ ಡಿವೈಸ್‌: ‘ಒರಿಜಿನಲ್‌ ಡಿವೈಸ್‌ ಎಲ್ಲ ಮೇಟಿ ಹತ್ರ ಇದಾವಾ ಅಥವಾ ಯಾರಿಗೆ ಕೊಟ್ಟಿದೀರಿ?’ ಎನ್ನುವ ಮುಲಾಲಿ ಪ್ರಶ್ನೆಗೆ ಸುಭಾಷ್‌,  ‘ಮಿನಿಸ್ಟ್ರ ಹತ್ರಾನೆ ಇದೆ’ ಎನ್ನುತ್ತಾರೆ. ಅದಕ್ಕೆ ಮುಲಾಲಿ, ‘ಸುಟ್‌ಹಾಕಬಾರದಾ. ಅದನ್ನ ಯಾಕೆ ಇಟ್ಟಕೊಂಡಿದಾರೆ?’ ಎಂದು ಕೇಳುತ್ತಾರೆ!

ಕೊಂಡಿಯಾದ ವಾಹಿನಿ ವರದಿಗಾರ

ಮುಲಾಲಿ ಮತ್ತು ಸುಭಾಷ್‌ ನಡುವಿನ ಸಂಭಾಷಣೆಗೆ ಮೊದಲು, ದೃಶ್ಯವಾಹಿನಿಯೊಂದರ ಬಳ್ಳಾರಿ ವರದಿಗಾರರೊಬ್ಬರು ಸುಭಾಷ್ ಜೊತೆಗೆ ಮಾತನಾಡುತ್ತಾರೆ.

ಸುಭಾಷ್‌ ಮೊದಲಿಗೆ ‘ಹೇಳಿದ್ದೀರಾ ಸರ್‌’ ಎನ್ನುತ್ತಾರೆ. ಅದಕ್ಕೆ ವರದಿಗಾರರು, ‘ಹೂಂ ಹೇಳಿದ್ದೀನಿ. ಅವರಿಗೆ ಕೊಡ್ತೀನಿ ಇರಿ. ಒಂದ್ನಿಮಿಷ ಇರಿ. ಮೇಲ್ಗಡೆ ಹೋಗ್ತಿನಿ. ಕೊಡ್ತಿನಿ ನೋಡ್ರಿ ಈಗ’ ಎನ್ನುವ ವರದಿಗಾರರು, ‘ಅಣ್ಣ ಇವ್ರು ಫೋನ್‌ ಮಾಡಿದಾರೆ, ತಗೊಳ್ರಿ’ ಎಂದು ಮುಲಾಲಿಗೆ ಕೊಟ್ಟು, ‘ನಿನ್ನೆಯಿಂದ ಫೋನ್‌ ಮಾಡ್ತಾ ಇದಾರೆ ಅವ್ರು’ ಎನ್ನುತ್ತಾರೆ.

ವರದಿಗಾರರನ್ನು ಸಂಪರ್ಕಿಸಲು ಸುಭಾಷ್‌ ಎರಡು ದಿನದಿಂದ ಪ್ರಯತ್ನಿಸುತ್ತಿದ್ದರು ಎಂಬ ಸಂಗತಿಯ ಕಡೆಗೂ ಸಂಭಾಷಣೆ ಗಮನ ಸೆಳೆಯುತ್ತದೆ.
ಮುಲಾಲಿ ಅವರಿಗೆ ಫೋನು ಕೊಡುವ ಮುನ್ನ ವರದಿಗಾರರು ಸುಭಾಷ್‌ ಅವರೊಂದಿಗೆ ಪ್ರತ್ಯೇಕವಾಗಿ 8 ನಿಮಿಷ 37 ಸೆಕೆಂಡ್‌ ಕಾಲ ಮಾತನಾಡುತ್ತಾರೆ. ಅದರ ಧ್ವನಿಮುದ್ರಿಕೆಯೂ ‘ಪ್ರಜಾವಾಣಿ’ ಬಳಿ ಇದೆ.

‘ಅಣ್ಣನ (ಮುಲಾಲಿ) ಮನೆ ಹತ್ರ ಹೋಗಕ್‌ಹೋಗಬ್ಯಾಡ್ರಿ. ಅಲ್ಲೆಲ್ಲ ಪ್ರೆಸ್‌ನವ್ರು ಇದ್ದಾರೆ. ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದ್ರೆ ನೀವೇ ದಾರಿ ಮಾಡಿಕೊಟ್ಟಂಗೆ ಆಗುತ್ತೆ ನೋಡಿ. ಇಲ್ಲಂದ್ರ ನೀವು ಟಾರ್ಗೆಟ್‌ ಆಗಿಬಿಡ್ತೀರಿ’ ಎಂದು ಎಚ್ಚರಿಸುತ್ತಾರೆ!

‘ನಾನೀಗ ಅಣ್ಣಂಗೆ ಹೇಳಿ ನಿಮಗೆ ಭೇಟಿ ಮಾಡಿಸೋ ಪ್ರಯತ್ನ ಮಾಡ್ತಿನಿ. ಅವರಿಗೂ ಥ್ರೆಟ್‌ ಕಾಲ್‌ಗಳು ಶುರುವಾಗಿವೆ. ಹೀಗಾಗಿ ಅವರು ಬೇರೆ ಕಡೆ ಇದಾರೆ. ಅದಕ್ಕೆ ನಾನೇ ಆಪರೇಟ್‌ ಮಾಡ್ತಾ ಇದೀನಿ’ ಎನ್ನುತ್ತಾರೆ.

‘ನಿನ್ನೆ ರಾತ್ರಿ ನೀವು ಅಷ್ಟು ಹೇಳಿದ್ದಿಕ್ಕೆ ಇಷ್ಟು ವೇಟಿಂಗ್‌. ಇಲ್ಲಂದ್ರ ಏನೇನೇನೋ ಆಗಿಬಿಡ್ತಿತ್ತು ರಾಜ್ಯದಾಗ ಸಂಚಲನಾ ಆಗಿಬಿಡ್ತಿತ್ತು’ ಎನ್ನುತ್ತಾರೆ.
‘ಕೆಂಪಯ್ಯ ಅವರು ರಾಜಶೇಖರ ಅವರ ಹತ್ರ ಬಂದ್‌ ಹೋಗಿದ್ದಾರಂತೆ’ ಎನ್ನುವ ವರದಿಗಾರರು, ತನ್ನ ಪಕ್ಕದಲ್ಲೇ ಇರುವ ವ್ಯಕ್ತಿಯೊಬ್ಬರು ಪಿಸು ಮಾತಿನಲ್ಲಿ ಹೇಳಿದ್ದನ್ನು ಸುಭಾಷ್‌ ಅವರ ಬಳಿ ಎರಡು ಬಾರಿ ಪ್ರಸ್ತಾಪಿಸುತ್ತಾರೆ. ಮುಲಾಲಿ ಅವರಂತೆಯೇ ಅವರೂ ಸುಭಾಷ್‌ಗೆ ‘ಕೂಲಾಗಿರಿ ಬ್ರದರ್‌’ ಎನ್ನುತ್ತಾರೆ.

</p><p><strong>ಕೆಂಪಯ್ಯ,ಹಜಾರೆ, ಸಂತೋಷ್‌ ಹೆಗ್ಡೆ..</strong></p><p>ಸುಭಾಷ್‌ –ಮುಲಾಲಿ ನಡುವಿನ ಮಾತುಕತೆಯಲ್ಲಿ ಈ ಮೂವರು ಗಣ್ಯರ ಉಲ್ಲೇಖವೂ ಬರುತ್ತದೆ. ಕೆಂಪಯ್ಯ ಫೋನ್‌ ಮಾಡ್ತಾರೆ.<br/>&#13; ‘ಕೆಂಪಯ್ಯ ಫೋನ್‌ ಮಾಡಿದ್ದಾರೆ’, ‘ಯಾರನ್ನೂ ಮುಖ ಭೇಟಿ ಮಾಡಬಾರದು ಎಂದು ಸಿ.ಎಂ ಹೇಳಿದ್ದಾರೆ’ ಎನ್ನುವ ಮುಲಾಲಿ, ‘ಅಣ್ಣಾ ಹಜಾರೆ ಅವರ ಟೈಂ ತಗೋಳ್ತೀನಿ. ಸಂತೋಷ್‌ ಹೆಗ್ಡೆ ಅವರನ್ನು ಅವರು ಕರೆಸಲಿ’ ಎನ್ನುತ್ತಾರೆ. ಆದರೆ ಅದಕ್ಕೆ ಸುಭಾಷ್‌ ಒಪ್ಪದೆ ‘ಹೆಚ್ಚು ಜನರಿಗೆ ವಿಷಯ ತಲುಪುವುದು ಬೇಡ’ ಎನ್ನುತ್ತಾರೆ.</p><p><strong>ಗೊಂದಲಗಳ ಗೂಡಾದ ಪ್ರಕರಣ</strong></p><p>ಮೇಟಿ ಅವರ ಪ್ರಕರಣವು ಗೊಂದಲಗಳ ಗೂಡಾಗಿದೆ. ಇದು ಮೇಟಿ ಅವರಿಂದ ಆದ ಅಧಿಕಾರದ ದುರ್ಬಳಕೆಯೇ? ಹನಿ ಟ್ರ್ಯಾಪೇ? ಬ್ಲಾಕ್‌ ಮೇಲೇ? ಮೇಟಿ ಅವರು ಖಾಸಗಿ ಸಂಬಂಧ ಹೊಂದಿದ್ದ ಮಹಿಳೆಯಿಂದ ಆದ ವಿಶ್ವಾಸದ್ರೋಹವೇ? ಮೇಟಿ ಅವರ ಮೇಲೆ ಭದ್ರತಾ ಸಿಬ್ಬಂದಿಯ ದ್ವೇಷವೇ? ‘ಸಮಾಜ ಸುಧಾರಕ’ರು ಹಾಗೂ ಮಾಧ್ಯಮದ ಪ್ರತಿನಿಧಿಗಳು ಒಟ್ಟಾಗಿ ಮಾಡಿದ ಷಡ್ಯಂತ್ರವೇ? ಈ ಎಲ್ಲವುಗಳಿಗೆ ಸಿಐಡಿ ತನಿಖೆ ಉತ್ತರವನ್ನು ಹುಡುಕುತ್ತದೆಯೇ?</p><p><strong>ಆಸ್ಪತ್ರೆಯಿಂದ ಅಜ್ಞಾತ ಸ್ಥಳಕ್ಕೆ ಮಹಿಳೆ?</strong></p><p>ಬಾಗಲಕೋಟೆ: ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದಿಢೀರ್ ಅಸ್ವಸ್ಥರಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತ ಮಹಿಳೆ ಮಧ್ಯರಾತ್ರಿಯೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.</p><p>ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಆಕೆಗೆ ಡಿಸಿಆರ್‌ಬಿ ಡಿವೈಎಸ್‌ಪಿ ರವೀಂದ್ರ ಶಿರೂರ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಮಧ್ಯರಾತ್ರಿ ಬಲವಂತದಿಂದ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಆಕೆ ಸಂಬಂಧಿಕರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p><p>‘ಜೀವ ಭಯವಿದೆ ಎಂದು ಆಕೆಯ ಮೌಖಿಕ ಮನವಿ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಅನಾರೋಗ್ಯದಿಂದ ಗುಣಮುಖರಾದ ಕಾರಣ ಮಧ್ಯರಾತ್ರಿ ಅವರೇ ಸ್ವ ಇಚ್ಛೆಯಿಂದ ತೆರಳಿದ್ದಾರೆ. ಹಾಗಾಗಿ ಭದ್ರತೆ ಹಿಂದಕ್ಕೆ ಪಡೆಯಲಾಗಿದೆ. ಆಸ್ಪತ್ರೆಯಿಂದ ಮಹಿಳೆ ಎಲ್ಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಎಸ್‌್ಪಿ ಎಂ.ಎನ್.ನಾಗರಾಜ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.</p><p>ಇಲ್ಲಿನ ನವನಗರದ 44ನೇ ಸೆಕ್ಟರ್‌ನಲ್ಲಿರುವ ಆಕೆಯ ಮನೆಗೂ ಬೀಗ ಹಾಕಲಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದರು.</p><p><strong>ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ</strong></p><p><strong>ಬಾಗಲಕೋಟೆ</strong>: ಇಲ್ಲಿನ ನವನಗರದಲ್ಲಿರುವ ಮೇಟಿ ಅವರ ಗೃಹ ಕಚೇರಿಯ ಬಳಿ ಖಾಸಗಿ ಸುದ್ದಿ ವಾಹಿನಿಯೊಂದರ ಇಬ್ಬರು ವರದಿಗಾರರು ಹಾಗೂ ಕ್ಯಾಮೆರಾಮನ್‌ ಒಬ್ಬರ ಮೇಲೆ ಮೇಟಿ ಬೆಂಬಲಿಗರ ಬುಧವಾರ ಹಲ್ಲೆ ನಡೆಸಿದರು.</p><p>ಆ ಜಾಗದ ಚಿತ್ರಣವನ್ನು ವರದಿ ಮಾಡುತ್ತಿದ್ದ ಪಬ್ಲಿಕ್ ಟಿ.ವಿ ವರದಿಗಾರರಾದ ಪ್ರವೀಣ ರೆಡ್ಡಿ, ರವಿ ಹಳ್ಳೂರ ಹಾಗೂ ಕ್ಯಾಮೆರಾಮನ್‌ ನಾರಾಯಣ ಮೇಲೆ ಉದ್ರಿಕ್ತರು ಹಲ್ಲೆ ನಡೆಸಿದರು. ಇದರಿಂದ ಪ್ರವೀಣ ರೆಡ್ಡಿ ಅವರ ಕೈ ಹಾಗೂ ಕಾಲಿಗೆ ತೀವ್ರ ಪೆಟ್ಟಾಯಿತು. ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹಾಗೂ ಇನ್‌ಸ್ಪೆಕ್ಟರ್ ಶಿವಶಂಕರ ಗಣಾಚಾರಿ ಉದ್ರಿಕ್ತರನ್ನು ಅಲ್ಲಿಂದ ಚದುರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದರು.</p><p>ಪಾನಮತ್ತರಾಗಿದ್ದ ಕೆಲವರು, ಅಲ್ಲಿದ್ದ ಉಳಿದ ಪತ್ರಕರ್ತರನ್ನೂ ಬೆದರಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕ್ಯಾಮೆರಾ ಹಿಡಿದುಕೊಂಡು ಬಂದಿದ್ದ ಎಲ್ಲರನ್ನೂ ಬಲವಂತವಾಗಿ ಕಾಂಪೌಂಡ್‌ನಿಂದ ಹೊರಗೆ ಕಳುಹಿಸಿದರು.</p><p>ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ನಂತರ ಎಸ್ಪಿ ಎಂ.ಎನ್.ನಾಗರಾಜ ಅವರಿಗೆ ದೂರು ಸಲ್ಲಿಸಿದರು.</p><p><strong>ಸುಭಾಷ್ ಮನೆಗೆ ಬಿಗಿ ಭದ್ರತೆ</strong></p><p><strong><img alt="" src="https://cms.prajavani.net/sites/pv/files/article_images/2016/12/15/pvec15shrbkt2.jpg" style="width: 400px; height: 400px;" data-original="/http://www.prajavani.net//sites/default/files/images/pvec15shrbkt2.jpg"/></strong></p><p><strong>ಬಾಗಲಕೋಟೆ:</strong> ಎಚ್‌.ವೈ.ಮೇಟಿ ಅವರ ರಾಸಲೀಲೆ ಸಿ.ಡಿ. ಚಿತ್ರೀಕರಿಸಿದ ಆರೋಪ ಹೊತ್ತಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್‌ ಸುಭಾಷ್‌ ಮುಗಳಖೋಡ ಮೂರು ದಿನದಿಂದ ನಾಪತ್ತೆಯಾಗಿದ್ದಾರೆ. ಬುಧವಾರ ಅವರ ಮನೆಗೆ ಬಿಗಿ ಪೊಲೀಸ್‌್ ಭದ್ರತೆ ಒದಗಿಸಲಾಗಿತ್ತು.</p><p>ಸುಭಾಷ್‌ ತಂದೆ ವೆಂಕಣ್ಣ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದು, ಅವರ ಕುಟುಂಬದ ಸದಸ್ಯರು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು.</p><p>ಗನ್‌ಮ್ಯಾನ್‌ ಅಲ್ಲ:‘ಸುಭಾಷ್ ಮುಗಳಖೋಡ ಮೇಟಿ ಅವರ ಗನ್‌ಮ್ಯಾನ್ ಅಲ್ಲ. ಬದಲಿಗೆ ಮಹಿಳೆಯ ಮೂಲಕವೇ ಮೇಟಿ ಅವರಿಗೆ ಹತ್ತಿರವಾಗಿದ್ದರು. ಮೇಟಿ ಸಚಿವರಾದ ವೇಳೆ ತನ್ನನ್ನು ಗನ್‌ಮನ್ ಆಗಿ ನೇಮಿಸಿಕೊಳ್ಳುವಂತೆ ಸುಭಾಷ್ ಬೇಡಿಕೆ ಇಟ್ಟಿದ್ದರು. ಆದರೆ ಮೇಟಿ ಅದನ್ನು ನಿರಾಕರಿಸಿದ್ದರು’ ಎಂದು ಅವರ ಆಪ್ತರೊಬ್ಬರು ತಿಳಿಸಿದರು.</p><p><strong>ಹುಬ್ಬಳ್ಳಿಯಲ್ಲಿ ಸುಭಾಷ್  ವಾಸ್ತವ್ಯ?</strong></p><p>ಹುಬ್ಬಳ್ಳಿ: ಎಚ್‌.ವೈ.ಮೇಟಿ ಅವರ ರಾಸಲೀಲೆ ಸಿ.ಡಿ ಚಿತ್ರೀಕರಿಸಿದ ಆರೋಪ ಹೊತ್ತು ನಾಪತ್ತೆಯಾಗಿರುವ ಬಾಗಲಕೋಟೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್‌ ಸುಭಾಷ್‌ ಮುಗಳಖೋಡ ಮೂರು ದಿನಗಳಿಂದ ಹುಬ್ಬಳ್ಳಿಯಲ್ಲಿದ್ದರು ಎನ್ನಲಾಗಿದೆ.</p><p>ನವನಗರ ಎಪಿಎಂಸಿ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಸಂಬಂಧಿಕರೊಬ್ಬರು ಸುಭಾಷ್‌ಗೆ ಆಶ್ರಯ ನೀಡಿದ್ದರು ಎಂದು ತಿಳಿದುಬಂದಿದೆ.  ಆದರೆ, ಸುಭಾಷ್‌ ಸಾರ್ವಜನಿಕ ಸ್ಥಳದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ.<br/>&#13; ‘ಕಾನ್‌ಸ್ಟೆಬಲ್‌ ಮನೆಯಲ್ಲಿ ಸುಭಾಷ್‌ ಆಶ್ರಯ ಪಡೆದಿರುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಅವರು ಇರುವುದು ಖಾತರಿಯಾದಲ್ಲಿ ಕೂಡಲೇ ಪೊಲೀಸ್‌ ಕಮಿಷನರ್‌ ಗಮನಕ್ಕೆ ತರುತ್ತೇನೆ’ ಎಂದು ನವನಗರ ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಆರ್‌. ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.</p><p><strong>ಮೇಟಿ ಲೈಂಗಿಕ ಹಗರಣದ ಹಿಂದೆ  ಪಿತೂರಿ ಇದೆ: ದಿನೇಶ್‌ ಗುಂಡೂರಾವ್‌</strong></p><p>ಪ್ರಜಾವಾಣಿ ವಾರ್ತೆ</p><p>ಬೆಂಗಳೂರು: ಎಚ್‌.ವೈ. ಮೇಟಿ ಲೈಂಗಿಕ ಹಗರಣದ ಹಿಂದೆ ಪಿತೂರಿ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.<br/>&#13; ಬುಧವಾರ ಸುದ್ದಿಗಾರರ ಜತೆ ಅವರು ಮಾತನಾಡಿ, ಉದ್ದೇಶಪೂರ್ವಕವಾಗಿ ಕ್ಯಾಮೆರಾ ಫಿಕ್ಸ್‌ ಮಾಡಲಾಗಿದೆ. ಇದರ ಹಿಂದಿನ ಉದ್ದೇಶವೇನು ಮತ್ತು ಇರುವ ವ್ಯಕ್ತಿಗಳನ್ನು ಪತ್ತೆ ಮಾಡಬೇಕಾಗಿದೆ ಎಂದು ಹೇಳಿದರು.<br/>&#13; ಗೋಪ್ಯವಾಗಿ ಕ್ಯಾಮೆರಾ ಇಡುವುದು ಕೂಡ ಕಾನೂನು ಪ್ರಕಾರ ಸರಿಯಲ್ಲ. ತನಿಖೆ ಆದರೆ ಎಲ್ಲವೂ ಬಯಲಿಗೆ ಬರುತ್ತದೆ ಎಂದು ತಿಳಿಸಿದರು.<br/>&#13; ಇದು ದುರಾದೃಷ್ಟಕರ ಘಟನೆ ಮತ್ತು ಮೇಟಿ ಅವರ ವೈಯಕ್ತಿಕ ವಿಚಾರವಾಗಿದೆ. ಪಕ್ಷಕ್ಕಾಗಲಿ ಸರ್ಕಾರಕ್ಕಾಗಲಿ ಸಂಬಂಧ ಇಲ್ಲ ಎಂದು ಹೇಳಿದರು.</p><p> </p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT