ಸೆಟ್ಲ್ ಮಾಡ್ಕೊಂಡು ಬರ್ತೀವಿ
ವಿಜಯಪುರ: ಇಲ್ಲಿನ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಲಿಖಿತ ಸಂಪ್ರದಾಯವೊಂದು ಜಾರಿಯಲ್ಲಿದೆ. ಅದು ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ಪಾಲನೆಯಾಯಿತು. ಸಭೆಯ ಆರಂಭದ ಅರ್ಧ ತಾಸು ಹಳೆಯ ವಿಷಯಗಳ ಚರ್ಚೆಗೆ ಮೀಸಲು. ಈ ವಿಷಯಗಳು ಪ್ರತಿ ಸಭೆಯಲ್ಲೂ ಚರ್ಚೆಗೆ ಬರುತ್ತವೆ. ಆದರೆ ಇದುವರೆಗೂ ಅವುಗಳಿಗೆ ಉತ್ತರ ಸಿಕ್ಕಿಲ್ಲ. ಈ ಬಾರಿಯೂ ಪುನರಾವರ್ತನೆಯಾಯಿತು. ಸದಸ್ಯರು ಅರ್ಧ ತಾಸು ಮಾತನಾಡಿದರೂ ಮೇಯರ್ ಅನೀಸ್ ಫಾತಿಮಾ ಬಕ್ಷಿ ಸಹ ಮೌನ ಮುರಿಯದ ತಮ್ಮ ಸಂಪ್ರದಾಯಕ್ಕೆ ಜೋತುಬಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.