ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2016ನೇ ಸಾಲಿನ ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿಗಳು ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟವಾಗಿವೆ.
ನಾಗೇಶ್ ಹೆಗಡೆ (ವಿಜ್ಞಾನ ಸಾಹಿತ್ಯ), ಡಾ.ಎಚ್.ಎಸ್. ಶ್ರೀಮತಿ (ವಿಮರ್ಶಕರು, ಅನುವಾದಕರು), ಪ್ರೊ. ಓ.ಎಲ್. ನಾಗಭೂಷಣಸ್ವಾಮಿ (ವಿಮರ್ಶಕರು), ಬಸವರಾಜು ಕುಕ್ಕರಹಳ್ಳಿ (ಕಥೆಗಾರ), ಡಾ. ಬಾಳಾಸಾಹೇಬ ಲೋಕಾಪುರ (ಕಾದಂಬರಿ, ಕಥೆಗಾರ) ಅವರುಗಳಿಗೆ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದರ ಜತೆಯಲ್ಲಿ 16 ಪುಸ್ತಕ ಬಹುಮಾನ ಪ್ರಶಸ್ತಿ ಹಾಗೂ 7 ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.