ಮೈಸೂರು: ಭಾಷಾವಿಜ್ಞಾನಿ ಪ್ರೊ.ಕಿಕ್ಕೇರಿ ನಾರಾಯಣ (67) ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಭಾರತೀಯ ಭಾಷಾ ಸಂಸ್ಥಾನ ದಲ್ಲಿ (ಸಿಐಐಎಲ್) ಅಕಾಡೆಮಿಕ್ ಸೆಕ್ರೆಟರಿಯಾಗಿ ನಿವೃತ್ತರಾಗಿದ್ದರು.
ಬುಧವಾರ ಮಧ್ಯಾಹ್ನ 12 ಗಂಟೆಗೆ ವಿಜಯನಗರದ ಮನೆಯಲ್ಲಿ ಸಾರ್ವ ಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಂಪರ್ಕ ಸಂಖ್ಯೆ 9448910086.