‘ಗಾಂಧಿಯವರೊಂದಿಗೆ 11 ಯುವತಿಯರ ವಾಗ್ವಾದ’ ಎಂಬ ಅಂಕಣದಲ್ಲಿ ರಾಮಚಂದ್ರ ಗುಹಾ ಅವರು ‘ಮಹಾತ್ಮನಲ್ಲೂ ಇದ್ದ ಪುರುಷ ಪ್ರಧಾನ ಪೂರ್ವಗ್ರಹಕ್ಕೆ ಬೆಳಕು ಚೆಲ್ಲಿದ ದಿಟ್ಟೆಯರು’ ಎಂದು ಹೇಳಿದ್ದಾರೆ (ಗುಹಾಂಕಣ, ಪ್ರ.ವಾ., ಜ. 6).
ಇಲ್ಲಿ ಒಟ್ಟು ವಿಷಯ ರಂಜಕಗೊಂಡು ಗಾಂಧೀಜಿಗೆ ಅಪಚಾರವೆಸಗಿದಂತೆ ಅನ್ನಿಸುತ್ತದೆ. ನನ್ನ ಅರಿವಿನ ಮಟ್ಟಿಗೆ ಗಾಂಧೀಜಿ ಎಲ್ಲಿಯೂ ಪುರುಷ ಪ್ರಧಾನ ಎನ್ನುವುದು ಗೋಚರಿಸುವುದಿಲ್ಲ. ಆ ಹುಡುಗಿಯರ ಪತ್ರವು ಸಮಜಾಯಿಷಿಗಾಗಿ ಬರೆದಿರುವಂಥದ್ದು. ವಾಗ್ವಾದಕ್ಕಿಳಿದು ಮಹಾತ್ಮನಿಗೆ ಅವಮಾನ ಮಾಡಲು ಹೊರಟಿರುವಂಥದ್ದಲ್ಲ. ಈ ರೀತಿಯ ಪ್ರಶ್ನೆ ಮತ್ತು ಉತ್ತರ ರೀತಿಯ ಬರವಣಿಗೆಯನ್ನು ಗಾಂಧೀಜಿಯವರ ಬದುಕಿನಲ್ಲಿ ಯಥೇಚ್ಛವಾಗಿ ನೋಡಬಹುದು.