ರಾಜಾಜಿನಗರದ ಗ್ರಾಮೀಣ ಅಂಗಡಿಯು ಈಚೆಗೆ ರಾಮಮಂದಿರ ಮೈದಾನದಲ್ಲಿ ಮೂರು ದಿನಗಳ ‘ಗ್ರಾಮೀಣ ಸಿರಿ ಸಂಕ್ರಾಂತಿ ಸುಗ್ಗಿ ಸಂಭ್ರಮ’ ಸಿರಿಧಾನ್ಯಗಳ ಪ್ರದರ್ಶನ ಹಮ್ಮಿಕೊಂಡಿತ್ತು.
‘ಸಿರಿಧಾನ್ಯಗಳ ಮಹತ್ವ ಮತ್ತು ಪ್ರಯೋಜನ’ ವಿಷಯ ಕುರಿತು ವಿವಿಧ ಆಹಾರ ತಜ್ಞರ ಲೇಖನಗಳ ಸಂಗ್ರಹ ಹಾಗೂ ‘ಉತ್ತಮ ಆರೋಗ್ಯಕ್ಕಾಗಿ ಆಹಾರ ಜಾಗೃತಿ’ ಸಿ.ಡಿ. ಬಿಡುಗಡೆ ಮಾಡಲಾಯಿತು.
ಅಪ್ಪಗೆರೆ ತಿಮ್ಮರಾಜು ಅವರು ಜಾನಪದ ಗೀತೆಗಳನ್ನು ಹಾಡಿ ಪ್ರದರ್ಶನಕ್ಕೆ ರಂಗು ತುಂಬಿದರು. ಶಾಸಕ ಎಸ್.ಸುರೇಶ್ ಕುಮಾರ್ ಮೇಳವನ್ನು ಉದ್ಘಾಟಿಸಿದರು.
ರಾಜಾಜಿನಗರ ಹಾಗೂ ಜಯನಗರ ಗ್ರಾಮೀಣ ಅಂಗಡಿಯಲ್ಲಿ ಜ.30ರವರೆಗೆ ಸಿರಿಧಾನ್ಯಗಳು, ಖಾದಿ, ಕೈಮಗ್ಗ ಉತ್ಪನ್ನಗಳ ಮೇಲೆ ಶೇ30ರವರೆಗೂ ರಿಯಾಯಿತಿ ಘೋಷಿಸಿದ್ದಾರೆ.