ಶಿರಸಿ ರೋಟರಿ ಕ್ಲಬ್ ಮತ್ತು ಹುಬ್ಬಳ್ಳಿಯ ಐ ಬ್ಯಾಂಕ್ ಇವರ ಸಹಯೋಗದಲ್ಲಿ ನಡೆದ ನೇತ್ರದಾನ ಶಿಬಿರದಲ್ಲಿ ಇಂಥ ಸಾಮಾಜಿಕ ಕಳಕಳಿಯ ಕೆಲಸವನ್ನು ಗ್ರಾಮಸ್ಥರು ಮಾಡಿದ್ದಾರೆ.
ಅಂದಹಾಗೆ, ಈ ಕಾರ್ಯಕ್ಕೆ ಮುನ್ನುಡಿ ಬರೆದವರು ಇದೇ ಗ್ರಾಮದ ನಿವಾಸಿ ಸರಸ್ವತಿ ಮಧುಕೇಶ್ವರ ಹೆಗಡೆ. ಇವರು ನೇತ್ರದಾನದ ಮಹತ್ವದ ಬಗ್ಗೆ ಗ್ರಾಮವಾಸಿಗಳಿಗೆ ತಿಳಿಹೇಳುವ ಮೂಲಕ ಗ್ರಾಮಸ್ಥರಲ್ಲಿ ದಾನಕ್ಕೆ ಸ್ಫೂರ್ತಿ ತುಂಬಿದ್ದಾರೆ. ಇಲ್ಲಿರುವ ಶಾಲೆಯ ಶತಮಾನೋತ್ಸವದಂದು ಎಲ್ಲರೂ ದಾನಕ್ಕೆ ಮುಂದೆ ಬಂದಿದ್ದಾರೆ.
‘ನೇತ್ರದಾನದ ಕುರಿತು ಹಲವಾರು ಅಂತೆಕಂತೆಗಳು, ಸುಳ್ಳುಕತೆಗಳು ಜನರಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಆದರೆ ಅದರ ಮಹತ್ವ ಸಾರುವ ಕೆಲಸ ಆಗಬೇಕಿದೆ. ಗ್ರಾಮದ ಒಬ್ಬರೇ ಒಬ್ಬರು ಮುಂದೆ ಬಂದರೂ ಇಡೀ ಗ್ರಾಮಸ್ಥರ ಮನಸ್ಸನ್ನು ಹೇಗೆ ಓಲೈಸಬಹುದು ಎನ್ನುವುದಕ್ಕೆ ಸರಸ್ವತಿ ಅವರೇ ಸಾಕ್ಷಿ’ ಎನ್ನುತ್ತಾರೆ ನೇತ್ರದಾನ ಸಮಿತಿಯ ಸಂಯೋಜಕರಾದ ಸಂಜಯ್ ಹೆಗಡೆ.
ಸಂಪರ್ಕಕ್ಕೆ: 9242127798.