‘ಪ್ರತಿಕೂಲ ಹವಾಮಾನ ಲೆಕ್ಕಿಸದೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಕಿರಿಯ ಅಧಿಕಾರಿ ಸೇರಿದಂತೆ ಏಳು ಯೋಧರನ್ನು ರಕ್ಷಿಸಲಾಗಿದೆ. ಮೂವರ ಮೃತದೇಹಗಳು ಗುರುವಾರ ಬೆಳಿಗ್ಗೆ ಪತ್ತೆಯಾಯಿತು’ ಎಂದಿದ್ದಾರೆ. ‘ಗುರೆಜ್ ವಲಯದಲ್ಲಿ ಬುಧವಾರ ಸಂಜೆ ಮತ್ತೊಂದು ಹಿಮಕುಸಿತ ಸಂಭವಿಸಿದೆ. ನಿಯಮಿತ ಗಸ್ತು ಕಾರ್ಯದ ಬಳಿಕ ಗಡಿ ಠಾಣೆಗೆ ಮರಳುತ್ತಿದ್ದ ಯೋಧರ ತಂಡ ಹಿಮದಡಿ ಸಿಲುಕಿದೆ. ರಕ್ಷಣಾ ಕಾರ್ಯಕರ್ತರು ಇದುವರೆಗೆ ಏಳು ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ’ ಎಂದು ಹೇಳಿದ್ದಾರೆ.