ಹೆಬ್ರಿ: ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ಸಮುದಾಯ ಭವನದ ಬಳಿ ನಿರ್ಮಿಸುವ ಅಡುಗೆ ಕೋಣೆಗೆ ಭೂಮಿ ಪೂಜೆ ನಡೆಯಿತು. ಶಾಸಕ ಸುನೀಲ್ ಕುಮಾರ್ ಅವರು ಈಚೆಗೆ ಭೂಮಿ ಪೂಜೆ ನೆರವೇರಿಸಿದರು. ವೇದಮೂರ್ತಿ ಎಚ್. ನಾಗರಾಜ್ ಜೋಯಿಸ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಎಪಿಎಂಸಿ ಸದಸ್ಯ ಸಂಜೀವ ನಾಯ್ಕ್, ಸಂಘದ ಅಧ್ಯಕ್ಷ ಶಿವ ನಾಯ್ಕ್, ಯುವ ಘಟಕದ ಅಧ್ಯಕ್ಷ ನಾಗೇಂದ್ರ ನಾಯ್ಕ್, ಪ್ರಮುಖರಾದ ಮಹಾಬಲ ನಾಯ್ಕ್, ಮಮತಾ ನಾಯ್ಕ್, ಶ್ಯಾಮ್ ನಾಯ್ಕ್, ಜ್ಯೋತಿ ನಾಯ್ಕ್, ಇಂದಿರಾ ನಾಯ್ಕ್, ಶಂಕರ ನಾಯ್ಕ್, ಮಾಧವ ನಾಯ್ಕ್, ಪುಷ್ಪರಾಜ್, ಕಸ್ತೂರಿ, ಅಮೃತ್ ಕುಮಾರ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕುಸುಮಾ ಪ್ರಭು, ಸಾವಿತ್ರಿ ನಾಯ್ಕ್, ಗಣೇಶ್ ಪ್ರಭು, ಎಚ್.ಕೆ.ಸುಧಾಕರ್, ರಾಘವೇಂದ್ರ ದೇವಾಡಿಗ, ಚಂದ್ರ ನಾಯ್ಕ್, ಗಣೇಶ್ ಕುಮಾರ್ ಜರ್ವತ್ತು ಇದ್ದರು.