ತರೀಕೆರೆ: 48 ವರ್ಷದಿಂದ ಮಮತಾ ಮಹಿಳಾ ಸಮಾಜವು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು , ಹೊಸ ಪದಾಧಿಕಾರಿಗಳು ಸಮಾಜವನ್ನು ಇನ್ನಷ್ಟು ಸಮಾಜ ಮುಖಿಯಾಗಿ ಕಟ್ಟಲು ಎಲ್ಲ ಮಹಿಳೆಯರ ಸಹಕಾರ ಮುಖ್ಯ ಎಂದು ಸಮಾಜದ ನೂತನ ಅಧ್ಯಕ್ಷೆ ಶ್ಯಾಮಲಾ ಮಂಜು ನಾಥ್ ಹೇಳಿದರು.
ಪಟ್ಟಣದ ಮಮತಾ ಮಹಿಳಾ ಸಮಾಜದ ಆವರಣದಲ್ಲಿ ಇತ್ತಿಚೆಗೆ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತ ನಾಡಿದರು.
ಸಮಾರಂಭ ಉದ್ಘಾಟಿಸಿ ಮಾತನಾ ಡಿದ ಶಾಸಕ ಜಿ.ಎಚ್.ಶ್ರೀನಿವಾಸ್ ಮಹಿಳಾ ಸಮಾಜವು ಸಮಾಜದಲ್ಲಿ ಎಲ್ಲರ ಜತೆಗೂಡಿ ಸೇವೆ ಸಲ್ಲಿಸುತ್ತ ಬಂದಿದೆ.
ಇನ್ನಷ್ಟು ಸಮಾಜ ಸೇವಾ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ ಎಂದರು. ಮಮತ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ರಶ್ಮಿ ರಮೇಶ್, ಲಕ್ಷ್ಮೀ ವಿಶ್ವನಾಥ್, ಹನುಮಂತಮ್ಮ, ಭಾಗ್ಯ ಜಯರಾಮ್, ರಮ್ಯಾ ಇದ್ದರು.