<p><strong>ಬೆಂಗಳೂರು:</strong> ‘ಕನಕದಾಸ ಸಂತ, ಮಾರ್ಗದರ್ಶಕ, ಕೀರ್ತನೆಕಾರ, ಪ್ರತಿಭಟನಾಕಾರ ಮಾತ್ರವಲ್ಲ, ಆತ ಪ್ರೇಮಕವಿಯೂ ಆಗಿದ್ದಾನೆ’ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಹೇಳಿದರು.</p>.<p>ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೂ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಕನಕದಾಸರ ಕಾವ್ಯಗಳಲ್ಲಿ ಮಹಿಳಾ ಸಂವೇದನೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕನಕದಾಸ ಮೋಹನ ತರಂಗಿಣಿ ಮತ್ತು ನಳಚರಿತೆ ಕಾವ್ಯಗಳನ್ನು ಶೃಂಗಾರ ರಸದಲ್ಲಿ ಕಟ್ಟಿದ್ದಾನೆ. ಹಾಗಾಗಿ ಆತನನ್ನು ಪ್ರೇಮಕವಿ ಹಾಗೂ ಪ್ರಣಯಕವಿ ಎಂದು ಕರೆಯಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಮೋಹನ ತರಂಗಿಣಿಯಲ್ಲಿನ ಬಾಣಸೂರನ ಭೋಗ ವೈಭವ, ಉಷಾದೇವಿಯ ಶೃಂಗಾರ ಹಾಗೂ ಉಷಾ–ಅನಿರುದ್ಧರ ಏಕಾಂತದ ಪ್ರಸಂಗಗಳಲ್ಲಿ ಶೃಂಗಾರ ರಸವಿದೆ’ ಎಂದರು.</p>.<p>‘ಕನಕರನ್ನು ಭಕ್ತಿ, ಕುಲ ಮತ್ತು ಪ್ರೇಮದ ವಿಷಯಗಳು ಹೆಚ್ಚು ಕಾಡಿದ್ದವು. ನಳಚರಿತೆ ಸ್ತ್ರೀ ಸಂವೇದನೆ ಬಿಂಬಿಸುತ್ತದೆ. ಅದನ್ನು ದಮಯಂತಿ ಚರಿತೆ ಎಂತಲೂ ಕರೆಯಬಹುದು’ ಎಂದರು.</p>.<p>‘ಜೈನ ಸಾಹಿತ್ಯಕ್ಕೆ ಪ್ರತಿಭಟನೆ ತೋರಲೆಂದೇ ಕನ್ನಡ ಸಾಹಿತ್ಯ ರಚನೆಯಾಗಿದೆ. ಜೈನ ಕವಿಗಳಿಂದ ಕನ್ನಡ ಸಾಹಿತ್ಯ ಬೆಳೆಯಿತು. ನಂತರ ವಚನ ಸಾಹಿತ್ಯ ಭಾಷೆಯನ್ನು ಬೆಳೆಸಿತು’ ಎಂದು ತಿಳಿಸಿದರು.</p>.<p>ಲೇಖಕಿ ಎನ್.ಆರ್.ಲಲಿತಾಂಬ ಮಾತನಾಡಿ, ‘ಕನಕ ಸ್ತ್ರೀಭೋಗದ ಸುಖವನ್ನು ವಿವರಿಸಿದ್ದಾನೆ. ಹಾಗೆಯೇ ಆ ಸುಖದಿಂದ ವಿಮಖವಾಗಿ ವೈರಾಗ್ಯ ತಾಳುವ ಪರಿಯನ್ನೂ ತಿಳಿಸಿದ್ದಾನೆ’ ಎಂದರು.</p>.<p>‘ಸಮಕಾಲಿನ ದಾಸರಿಗಿಂತ ಜನಪದರ ಬದುಕಿನ ಅನುಭವಗಳನ್ನು ಭಿನ್ನವಾಗಿ ಚಿತ್ರಿಸಿದ್ದಾನೆ. ಅಲ್ಲದೇ ಸಮಾಜದ ಒಪ್ಪಿತ ಮೌಲ್ಯ ಹಾಗೂ ಆದರ್ಶಗಳಿಂದ ಸ್ತ್ರೀಸ್ವಾತಂತ್ರವನ್ನು ಸೀಮಿತಗೊಳಿಸಿದ್ದಾನೆ’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕನಕದಾಸ ಸಂತ, ಮಾರ್ಗದರ್ಶಕ, ಕೀರ್ತನೆಕಾರ, ಪ್ರತಿಭಟನಾಕಾರ ಮಾತ್ರವಲ್ಲ, ಆತ ಪ್ರೇಮಕವಿಯೂ ಆಗಿದ್ದಾನೆ’ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಹೇಳಿದರು.</p>.<p>ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೂ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಕನಕದಾಸರ ಕಾವ್ಯಗಳಲ್ಲಿ ಮಹಿಳಾ ಸಂವೇದನೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕನಕದಾಸ ಮೋಹನ ತರಂಗಿಣಿ ಮತ್ತು ನಳಚರಿತೆ ಕಾವ್ಯಗಳನ್ನು ಶೃಂಗಾರ ರಸದಲ್ಲಿ ಕಟ್ಟಿದ್ದಾನೆ. ಹಾಗಾಗಿ ಆತನನ್ನು ಪ್ರೇಮಕವಿ ಹಾಗೂ ಪ್ರಣಯಕವಿ ಎಂದು ಕರೆಯಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಮೋಹನ ತರಂಗಿಣಿಯಲ್ಲಿನ ಬಾಣಸೂರನ ಭೋಗ ವೈಭವ, ಉಷಾದೇವಿಯ ಶೃಂಗಾರ ಹಾಗೂ ಉಷಾ–ಅನಿರುದ್ಧರ ಏಕಾಂತದ ಪ್ರಸಂಗಗಳಲ್ಲಿ ಶೃಂಗಾರ ರಸವಿದೆ’ ಎಂದರು.</p>.<p>‘ಕನಕರನ್ನು ಭಕ್ತಿ, ಕುಲ ಮತ್ತು ಪ್ರೇಮದ ವಿಷಯಗಳು ಹೆಚ್ಚು ಕಾಡಿದ್ದವು. ನಳಚರಿತೆ ಸ್ತ್ರೀ ಸಂವೇದನೆ ಬಿಂಬಿಸುತ್ತದೆ. ಅದನ್ನು ದಮಯಂತಿ ಚರಿತೆ ಎಂತಲೂ ಕರೆಯಬಹುದು’ ಎಂದರು.</p>.<p>‘ಜೈನ ಸಾಹಿತ್ಯಕ್ಕೆ ಪ್ರತಿಭಟನೆ ತೋರಲೆಂದೇ ಕನ್ನಡ ಸಾಹಿತ್ಯ ರಚನೆಯಾಗಿದೆ. ಜೈನ ಕವಿಗಳಿಂದ ಕನ್ನಡ ಸಾಹಿತ್ಯ ಬೆಳೆಯಿತು. ನಂತರ ವಚನ ಸಾಹಿತ್ಯ ಭಾಷೆಯನ್ನು ಬೆಳೆಸಿತು’ ಎಂದು ತಿಳಿಸಿದರು.</p>.<p>ಲೇಖಕಿ ಎನ್.ಆರ್.ಲಲಿತಾಂಬ ಮಾತನಾಡಿ, ‘ಕನಕ ಸ್ತ್ರೀಭೋಗದ ಸುಖವನ್ನು ವಿವರಿಸಿದ್ದಾನೆ. ಹಾಗೆಯೇ ಆ ಸುಖದಿಂದ ವಿಮಖವಾಗಿ ವೈರಾಗ್ಯ ತಾಳುವ ಪರಿಯನ್ನೂ ತಿಳಿಸಿದ್ದಾನೆ’ ಎಂದರು.</p>.<p>‘ಸಮಕಾಲಿನ ದಾಸರಿಗಿಂತ ಜನಪದರ ಬದುಕಿನ ಅನುಭವಗಳನ್ನು ಭಿನ್ನವಾಗಿ ಚಿತ್ರಿಸಿದ್ದಾನೆ. ಅಲ್ಲದೇ ಸಮಾಜದ ಒಪ್ಪಿತ ಮೌಲ್ಯ ಹಾಗೂ ಆದರ್ಶಗಳಿಂದ ಸ್ತ್ರೀಸ್ವಾತಂತ್ರವನ್ನು ಸೀಮಿತಗೊಳಿಸಿದ್ದಾನೆ’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>