ಕಡೂರು: ಇಲ್ಲಿನ ಪ್ರಸಿದ್ಧ ಅಂತರ ಘಟ್ಟೆಯ ದುರ್ಗಾಂಬ ದೇವಿ ರಥೋತ್ಸವ ಇದೇ 7, 8 ಹಾಗೂ 9ರಂದು ನಡೆಯ ಲಿದ್ದು, ಅಗತ್ಯ ಸಿದ್ಧತೆಯನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.
ಕಡೂರಿನ ಯಗಟಿಯ ತಮ್ಮ ನಿವಾಸ ದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿ, ಅಂತರಘಟ್ಟೆ ಕಡೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ಅತ್ಯಧಿಕ ವರಮಾನವಿ ದ್ದರೂ ಅಗತ್ಯ ಮೂಲ ಸೌಕರ್ಯ ಗಳ ಕೊರತೆ ಇತ್ತು.
ಈ ಕುರಿತು ಮುಜ ರಾಯಿ ಸಚಿವ ರುದ್ರಪ್ಪ ಲಮಾಣಿ ಅವರ ಗಮನ ಸೆಳೆದಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸುಮಾರು ₹6 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪ, ಜನರೇಟರ್ ಮುಂತಾದ ಅಗತ್ಯ ಸೌಕರ್ಯಗಳಿಗಾಗಿ ಖರ್ಚು ಮಾಡಲಾಗಿದೆ ಎಂದರು.
ದಶಕಗಳಿಂದ ದುರ್ಗಾಂಬ ದೇವಿಯ ಉತ್ಸವ ಮೂರ್ತಿಗೆ ಧರಿಸುವ ಅಮೂಲ್ಯ ಆಭರಣಗಳನ್ನು ಹೊರ ತೆಗೆಯದೆ ಖಜಾನೆಯಲ್ಲಿಯೇ ಇರಿಸ ಲಾಗಿದ್ದು, ಅವುಗಳನ್ನು ಎಷ್ಟೋ ಜನ ನೋಡಿಯೇ ಇರಲಿಲ್ಲ. ಈ ಬಾರಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಖಜಾನೆಯಲ್ಲಿರುವ ಆಭರಣಗಳನ್ನು ಅಂತರಘಟ್ಟೆ ಗ್ರಾಮಸ್ಥರ ಸಮ್ಮುಖ ಪರಿಶೀಲಿಸಲು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ.