ಬಾಗಲಕೋಟೆ: ಇಳಕಲ್ ನಗರಸಭೆ ಅಧಿಕಾರಿಗಳ ವಿರುದ್ಧ ಕೊಲೆ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಲು ಸೂಚನೆ ನೀಡುವಂತೆ ಹಾಗೂ ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಲ್ಲಿನ ಜನಜಾಗೃತಿ ವೇದಿಕೆ ಜಗದೀಶ ಕೆ.ಸರಾಫ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನಗರೋತ್ಥಾನ ಎರಡನೇ ಹಂತದಲ್ಲಿ ನಗರಸಭೆ ಕಾರ್ಯಾಲಯದಿಂದ ಪೊಲೀಸ್ ಗ್ರೌಂಡ್, ಕೊಪ್ಪರದ ಪೇಟೆ, ಬಜಾರ್, ಗ್ರಾಮ ಚಾವಡಿ ಮಾರ್ಗವಾಗಿ ಕಂಠಿ ಸರ್ಕಲ್ವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡಿಲ್ಲದಿದ್ದರೂ ಕಾಮಗಾರಿ ಪೂರ್ಣಗೊಂಡಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.