ಲೋಕ್ ಅದಾಲತ್ ಮಹತ್ವ ಕುರಿತು ವಿವರಿಸಿದ ವಕೀಲರ ಸಂಘದ ಅಧ್ಯಕ್ಷ ನಾಗಪ್ಪ ಸೂಡಿ, ಪ್ರಕರಣ ನಡೆದು ತೀರ್ಪು ಹೊರಬಂದರೆ ಒಬ್ಬ ವ್ಯಕ್ತಿ ಮಾತ್ರ ಗೆಲ್ಲಲು ಸಾಧ್ಯ. ಆದರೆ, ರಾಜಿ ಸಂಧಾನದಲ್ಲಿ ಇಬ್ಬರೂ ಗೆಲ್ಲುತ್ತಾರೆ. ನ್ಯಾಯಾಲಯದಲ್ಲಿ ಸೋಲು ಉಂಟಾಯಿತು ಎಂಬ ನೋವು ಇರುವುದಿಲ್ಲ. ಹಣ, ಶ್ರಮ ವ್ಯರ್ಥವಾಗುವುದಿಲ್ಲ. ಅಲ್ಲದೆ, ಮಾನಸಿಕ ನೆಮ್ಮದಿಯೂ ಇರುತ್ತದೆ ಎಂದು ತಿಳಿಸಿದರು. ರಾಜಿಯಾಗಲು ಮೊದಲೇ ನಿರ್ಧರಿಸಿದ ಪ್ರಕರಣಗಳನ್ನೂ ಸಹ ಜನತಾ ನ್ಯಾಯಾಲಯದಲ್ಲಿ ಸೇರಿಸಲಾಗಿತ್ತು ಎಂದು ಕೆಲ ವಕೀಲರು ಹೇಳಿದರು.