ಶಹಾಪುರ: ಮಾರ್ಚ್ 4ರಂದು ನಡೆಯಲಿರುವ ಶಹಾಪುರ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಸಿದ್ರಾಮ ಹೊನ್ಕಲ್ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ ನೇತೃತ್ವದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಸಿದ್ರಾಮ ಹೊನ್ಕಲ್ ಆಯ್ಕೆ ಮಾಡಲಾಯಿತು.
ಕತೆಗಾರ, ಲೇಖಕ, ಹಾಗೂ ಪ್ರವಾಸ ಕಥನ ಸೇರಿದಂತೆ 30 ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಳೆದ 30 ವರ್ಷಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ ಎಂದು ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ ತಿಳಿಸಿದರು.
ಸಾಹಿತಿಗಳಾದ ಶಿವಣ್ಣ ಇಜೇರಿ, ವಿಶ್ವಾರಾಧ್ಯ ಸತ್ಯಂಪೇಟೆ, ಚಂದ್ರಕಾಂತ ಕರದಳ್ಳಿ, ಸಣ್ಣ ನಿಂಗಪ್ಪ ನಾಯ್ಕೋಡಿ, ಡಾ.ಎಂ.ಎಸ್.ಶಿರವಾಳ, ನೀಲಕಂಠ ಬಡಿಗೇರ, ಬಸವರಾಜ ಅರುಣಿ ಇದ್ದರು.