ಕೆಲವು ಕಡೆ ಸುಳ್ಳು ವದಂತಿ, ಅಪಪ್ರಚಾರಗಳನ್ನು ಮಾಡುತ್ತಿರುವುದರಿಂದ ಜನರಲ್ಲಿ ಗೊಂದಲ ಮೂಡುತ್ತಿರುವುದು ವಿಷಾಧನೀಯ. ಜನರು ಜಾಗೃತರಾಗಿ ವದಂತಿಗಳಿಗೆ ಕಿವಿಗೊಡದೆ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಶಿಕ್ಷಕಿ ಹಸೀನಾಬೇಗಂ ಮಾತನಾಡಿ, ಜನರಿಗೆ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುಳ್ಳುವದಂತಿಗಳನ್ನು ನಂಬಿ ಭಯಭೀತರಾಗುತ್ತಿರುವುದು ಅಜ್ಞಾನ, ಅನಕ್ಷರತೆಯ ಕಾರಣವಾಗಿದೆ ಎಂದರು
ಸಮುದಾಯದ ಜನನಾಯಕರು ಹಾಗೂ ವಿದ್ಯಾವಂತರು ಈ ಬಗ್ಗೆ ಜಾಗೃತಿ, ಅರಿವು ಮೂಡಿಸಿ ಸರ್ಕಾರಿ ಯೋಜನೆಯ ಯಶಸ್ವಿಗೆ ಸಹಕರಿಸಿ ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಸಹಾಯಕಿಯರಾದ ರೂಪಾವತಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಶಾಂತಾ, ನಾಗಮಣಿ, ಆರೋಗ್ಯ ಇಲಾಖೆಯ ಶಿವಕುಮಾರ್, ಕೆ.ಆರ್.ರಮೇಶ್, ಮುಖಂಡರಾದ ಶೇಕ್ ದಸ್ತುಗೀರ್, ಅಂಗನವಾಡಿ ಕಾರ್ಯಕರ್ತೆ ಪದ್ಮ, ಮುನಿರತ್ನಮ್ಮ ಭಾಗವಹಿಸಿದ್ದರು.