ನವದೆಹಲಿ: ನಿರ್ದಿಷ್ಟ ಕೈಗಾರಿಕಾ ಘಟಕಗಳು ಮತ್ತು ಉದ್ದಿಮೆಗಳು ತಮ್ಮ ಕಾರ್ಮಿಕರಿಗೆ ಚೆಕ್ ಅಥವಾ ಎಲೆಕ್ಟ್ರಾನಿಕ್ ವಿಧಾನದ ಮೂಲಕ ವೇತನ ಪಾವತಿ
ಮಾಡುವುದನ್ನು ಕಡ್ಡಾಯ ಮಾಡಿರುವ ‘ವೇತನ ಪಾವತಿ (ತಿದ್ದುಪಡಿ) ಕಾಯ್ದೆ–2017’ಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಯಾವೆಲ್ಲಾ ಕೈಗಾರಿಕೆಗಳು ಈ ಕಾಯ್ದೆಯ ಅಡಿ ಬರುತ್ತವೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಷ್ಟೇ ನಿಗದಿಪಡಿಸಬೇಕಿದೆ.