ಬೆಂಗಳೂರು: ‘ದೈಹಿಕ ಭಿನ್ನತೆಯನ್ನು ಮಹಿಳೆಯರು ನ್ಯೂನತೆ ಅಥವಾ ಹೊರೆಯೆಂದು ಭಾವಿಸಬಾರದು’ ಎಂದು ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಎಚ್.ನಿಖಿಲಾ ಹೇಳಿದರು.
ನಗರದಲ್ಲಿನ ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿ ನಲ್ಲಿ ‘ಲಿಂಗತ್ವ ಅಸ್ಮಿತೆ’ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಲಿಂಗತ್ವ ಸೂಚಿಸುವಿಕೆ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದೆ. ಮಹಿಳೆಯರ ಅಸ್ಮಿತೆಯ ಕುರಿತಾಗಿ ಮಾತನಾಡುವಾಗ ಮಾತ್ರ ಲಿಂಗತ್ವ ಚರ್ಚೆಗೆ ಬರುತ್ತದೆ. ಹೆಣ್ಣಿನ ಮಾತು, ಉಡುಪು ಮತ್ತು ವರ್ತನೆ ಹೀಗೆಯೇ ಇರಬೇಕೆಂದು ನಿಬಂ ಧನೆಗಳನ್ನು ಸಮಾಜದಲ್ಲಿ ಹೇರಲಾಗುತ್ತಿದೆ’ ಎಂದರು.
‘ಸ್ತ್ರೀ–ಪುರುಷರ ನಡುವಿನ ದೈಹಿಕ ವ್ಯತ್ಯಾಸ ಆಧರಿಸಿ ಶ್ರೇಷ್ಠತೆ ನಿರ್ಧರಿಸಲಾಗುತ್ತಿದೆ. ಆ ಮನೋ ಭಾವವನ್ನು ಮಹಿಳೆಯರು ಹೊರೆ ಯೆಂದು ಭಾವಿಸುವ ಬದಲು ನಿರ್ಲಕ್ಷಿಸಬೇಕು’ ಎಂದರು.
ಮಹಾರಾಣಿ ಮಹಿಳಾ ಕ್ಲಸ್ಟರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ರವೀಂದ್ರ ರೇಷ್ಮೆ ಮಾತನಾಡಿ, ‘ಶ್ರೇಷ್ಠತೆಯ ಸ್ಥಾನಕ್ಕಾಗಿ ಗಂಡ ಹೆಂಡತಿ ಸ್ಪರ್ಧೆಗಿಳಿದಾಗ ಸ್ನೇಹಶೀಲತೆ ಮಾಯ ವಾಗುತ್ತದೆ. ಆಗ ಸಂಸಾರದಲ್ಲಿ ಸಾಮ ರಸ್ಯ ಇರುವುದಿಲ್ಲ. ಷರತ್ತುಗಳಿಲ್ಲದ ಸ್ನೇಹ ದಿಂದ ಲಿಂಗ ತಾರತಮ್ಯವನ್ನು ತೊಡೆದು ಹಾಕಬಹುದು’ ಎಂದು ಹೇಳಿದರು.