ಬೆಳಿಗ್ಗೆಯಿಂದ ಸದನದಲ್ಲಿ ಗದ್ದಲ ಎಬ್ಬಿಸಿದ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ತಲೆ ಎಣಿಕೆ ಬದಲು ಗುಪ್ತ ಮತದಾನಕ್ಕೆ ಅವಕಾಶ ನೀಡಬೇಕು ಆಗ್ರಹಸಿದ್ದರು. ಇದಕ್ಕೆ ಸ್ಪೀಕರ್ ಧನಪಾಲ್ ಅವರು ಅವಕಾಶ ನೀಡದೇ ಇದ್ದುದರಿಂದ ಡಿಎಂಕೆ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಟೇಬಲ್, ಕರ್ಚಿ ಒಡೆದು ಮೈಕ್ಗಳನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ, ಕಲಾಪವನ್ನು ಮುಂದೂಡಿ, ಮಧ್ಯಾಹ್ನದ ನಂತರ ಡಿಎಂಕೆ ಸದಸ್ಯರನ್ನು ಹೊರಗಿಟ್ಟು ವಿಶ್ವಾಸ ಮತಯಾಚಿಸಲಾಯಿತು.