ಸಾಗುತ್ತಿದ್ದ ತೇರಿನ ಚಕ್ರಕ್ಕೆ ಸನ್ನೆ ಹಾಕಿದ ರಭಸಕ್ಕೆ ಮುಂದಿನ ಬಲಭಾಗದ ಗಾಲಿಯ ಅಚ್ಚು ಮುರಿದು ತೇರು ಬಲಕ್ಕೆ ವಾಲಿತ್ತು. ಜಗಳೂರು ರಸ್ತೆಗೆ ತೇರು ಉರುಳಿ ಬಿತ್ತು. ಅಂಗಡಿ ಮುಂಗಟ್ಟುಗಳು ಇದ್ದ ಸ್ಥಳದಲ್ಲಿ ಬಿದ್ದಿದ್ದರೆ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, 108 ತುರ್ತು ವಾಹನಗಳ ಸಿಬ್ಬಂದಿ ಹಾಗೂ ಪೊಲೀಸರು ತುರ್ತು ರಕ್ಷಣಾ ಕಾರ್ಯಕ್ಕಾಗಿ ಜನದಟ್ಟಣೆಯನ್ನು ದಾಟಿ ತೇರಿನ ಸ್ಥಳಕ್ಕೆ ಹೋಗಲು ಹರಸಾಹಸ ಮಾಡಬೇಕಾಯಿತು.