ಶ್ರೇಯಸ್)
‘ಕೇರಳ, ಸಕಲೇಶಪುರ ಹಾಗೂ ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಯಷ್ಟೆ ಅಲ್ಲದೆ ಸಂದೇಶವೂ ಇದೆ’ ಎಂದ ಅವರು, ಚಿತ್ರದ ಪ್ರಮೋಷನ್ಗಾಗಿ ರಿಮಿಕ್ಸ್ ಹಾಡೊಂದನ್ನು ಸದ್ಯದಲ್ಲೇ ಮಾಡಲಾಗುವುದು ಎಂದರು. ಚಿತ್ರದಲ್ಲಿ ತಿಲಕ್ ಮತ್ತು ಚೇತನ್ ರಾಜ್ ನಾಯಕರಾಗಿ, ರನುಷಾ ಕಾಶ್ವಿ ಮತ್ತು ಮೇಘನಾ ಅಪ್ಪಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಬಿಗಿ ಮೈಗೆ ಅಂಟಿಕೊಂಡಿದ್ದ ಟೀ ಶರ್ಟ್ನಲ್ಲಿ ಮಿಂಚುತ್ತಿದ್ದ ತಿಲಕ್, ‘ಶ್ರೇಯಸ್ ಮೊದಲ ಸಲ ಕಥೆ ಹೇಳಿದಾಗ, ನಿಜವಾಗಿಯೂ ಹೇಳಿದ್ದನ್ನು ತೆರೆಗೆ ತರಬಲ್ಲರೇ ಎಂಬ ಅನುಮಾನ ಮೂಡಿತ್ತು. ಆದರೆ, ಸಿನಿಮಾ ಆರಂಭವಾದಾಗ, ಇವರಿಗೆ ಹೇಳುವುದಕ್ಕೆ ಬರುವುದಿಲ್ಲ. ಆದರೆ, ಮಾಡಿ ತೋರಿಸುತ್ತಾರೆ ಎಂಬುದು ಗೊತ್ತಾಯ್ತು. ತಮಗೇನು ಬೇಕು ಎಂಬುದನ್ನು ಸ್ಪಷ್ಟವಾಗಿ ಬಲ್ಲ ನಿರ್ದೇಶಕ ಶ್ರೇಯಸ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.