ಸಾಹಿತಿ ರಹಮತ್ ತರಿಕೆರೆ ಅವರು ‘ಕನ್ನಡ ಸಂಶೋಧನೆ ಗ್ರಹಿಕೆಗಳು’ ವಿಷಯದ ಕುರಿತು ಮಾತನಾಡಿ, ‘ಸಂಶೋಧನೆಯಲ್ಲಿ ಪ್ರಮುಖವಾಗಿ ಕಾಣುವುದು ಸತ್ಯಶೋಧನೆ ಮಾದರಿ ಮತ್ತು ದೃಷ್ಟಿಕೋನ ಮಂಡನೆ ಮಾದರಿ. ಸಂಶೋಧನೆ ವ್ಯಾಖ್ಯಾನ ಎಂದು ಕೇಳಿದ ಕೂಡಲೇ ಸತ್ಯಶೋಧನೆ ಎನ್ನುತ್ತಾರೆ. ಆದರೆ, ಎಷ್ಟೋ ಸಂಶೋಧನೆಗಳಲ್ಲಿ ಸತ್ಯವೇ ಇರುವುದಿಲ್ಲ. ಮಾಡಿದ ಕೆಲಸದ ಆಧಾರದ ಮೇಲೆ ಸಂಶೋಧನೆಗೆ ವ್ಯಾಖ್ಯಾನ ನೀಡಬೇಕು’ ಎಂದು ತಿಳಿಸಿದರು.