ಕಾಲುವೆಗೆ ಅರ್ಧ ಗೇಜ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆ’ ಎಂದು ದಶರಥ ದೊರೆ ಹೇಳಿದರು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ತೆನೆ ಕಟ್ಟುವ ಹಂತಕ್ಕೆ ಬಂದಿದ್ದು ಇಂತಹ ಸಂದರ್ಭದಲ್ಲಿ ಸರಿಯಾಗಿ ನೀರು ದೊರೆಯದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ ಎಂದರು.
‘ಈ ಮೊದಲು ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.28ರವರೆಗೆ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಈಗ ಏಕಾ ಏಕಿ ಮಾ.14ಕ್ಕೆ ನೀರು ನಿಲ್ಲಿಸಲಾಗುವುದು ಎಂದು ಹೇಳಲಾಗುತ್ತಿದೆ.
ಮಾರ್ಚ್ ಕೊನೆಯವರೆಗೆ ನೀರು ಹರಿಸಲಾಗುತ್ತದೆ ಎಂದು ಹೇಳಿದ್ದಕ್ಕೆ ನಾವು ಹಿಂಗಾರು ಹಂಗಾಮಿನ ಕೃಷಿಯಲ್ಲಿ ತೊಡಗಿದ್ದೇವೆ. ಅಧಿಕಾರಿಗಳ ಈ ಕ್ರಮದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಲಾಶಯ ವಿಭಾಗದ ಅಧಿಕಾರಿಗಳ ಭೇಟಿಗೆ ರೈತರು ನಾರಾಯಣಪುರಕ್ಕೆ ತೆರಳಿದರು.
ಚಿದಾನಂದ ಕಮತಗಿ, ಪರಮಣ್ಣ ಪೂಜಾರಿ, ಮಲ್ಲಣ್ಣ ಜಂಪಾ, ಶ್ಯಾಮಸುಂದರ ಶೆಟ್ಟಿ, ದೇವಿಂದ್ರಪ್ಪ ಗುಡಗುಂಟಿ, ವೆಂಕಟೇಶರಡ್ಡಿ, ವೀರಭದ್ರಯ್ಯ ದೇವಿಂದ್ರಪ್ಪ ಇದ್ದರು.