<p>‘ಸೆಕೆಂಡು ಬಕೆಟು ಬಾಲ್ಕನಿ’ ಇದು ಸಿನಿಮಾ ಶೀರ್ಷಿಕೆ. ವಿಚಿತ್ರವಾಗಿ ಧ್ವನಿಸುವ ಶೀರ್ಷಿಕೆಯ ಈ ಸಿನಿಮಾದಲ್ಲಿ ಹೇಳಲು ಹೊರಟಿರುವ ಕಥೆಯೂ ವಿಶೇಷವೇ. ಶೀರ್ಷಿಕೆಯಲ್ಲಿರುವ ಮೂರೂ ಶಬ್ದಗಳು ಚಿತ್ರಮಂದಿರಕ್ಕೆ ಸಂಬಂಧಿಸಿವೆ. ‘ಲವ್ ಇನ್ ಮಂಡ್ಯ’ ನಿರ್ದೇಶಕ ಅರಸು ಅಂತಾರೆ ತಮ್ಮ ಎರಡನೇ ಪ್ರಯತ್ನದಲ್ಲಿ ಇಂಥದ್ದೊಂದು ಹೊಸ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ.<br /> <br /> ‘ಬಾಲ್ಕನಿ, ಸೆಕೆಂಡು ಮತ್ತು ಬಕೆಟ್ ಎಂದು ಚಿತ್ರಮಂದಿರದಲ್ಲಿನ ಆಸನ ವ್ಯವಸ್ಥೆಯನ್ನು ಕರೆಯಲಾಗುತ್ತದೆ. ಸಿನಿಮಾ ಪರದೆಯ ಎದುರು ಬೆಂಕಿ ಆಕಸ್ಮಿಕ ತಡೆಗಟ್ಟಲು ಮರಳು ತುಂಬಿ ಇಡಲಾಗುತ್ತಿದ್ದ ಕೆಂಪು ಬಕೆಟ್ಗಳ ಕಡೆಯಿಂದ ಬಕೆಟ್ ಕ್ಲಾಸ್ ಶುರು. ನಂತರ ಸೆಕೆಂಡು, ಆಮೇಲೆ ಬಾಲ್ಕನಿ. ಮೈಸೂರು, ಮಂಡ್ಯದಲ್ಲಿ ಇನ್ನೂ ಈ ವ್ಯವಸ್ಥೆ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ಅಂತಾರೆ.<br /> <br /> ಇದು ಚಿತ್ರಮಂದಿರಗಳ ಹೊರಗೆ ಬ್ಲ್ಯಾಕ್ ಟಿಕೆಟ್ ಮಾರುವವರು ಮತ್ತು ಜನರಿಗೆ ಸಂಬಂಧಿಸಿದ ಚಿತ್ರವಂತೆ. ಮೈಸೂರಿನಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತರಾಗಿ ಅರಸು ಕಥೆ ಬರೆದಿದ್ದಾರೆ.<br /> <br /> ‘ಈ ಬ್ಲ್ಯಾಕ್ ಟಿಕೆಟ್ ಮಾರುವವರನ್ನು ನಾನು ಚಿಕ್ಕವನಿದ್ದಾಗಿನಿಂದಲೂ ಹತ್ತಿರದಿಂದ ಕಂಡಿದ್ದೇನೆ. ಅವರ ಜೀವನ ಶೈಲಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಇದು’ ಎಂದು ಹೇಳಿಕೊಂಡಿರುವ ಅರಸು ಈ ಚಿತ್ರವನ್ನು, ‘ಸಿನಿಮಾದಿಂದ ಸಿನಿಮಾಗೋಸ್ಕರ ಸಿನಿಮಾಗಾಗಿ’ ಅಂತಾರೆ.<br /> <br /> ಗಮನ ಸೆಳೆವ ಗೀತರಚನೆಕಾರ ಅರಸು ‘ಲವ್ ಇನ್ ಮಂಡ್ಯ’ದ ನಂತರ ಎರಡು ವರ್ಷಗಳ ಬಳಿಕ ಮತ್ತೆ ಅವರು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕಳೆದ ವಾರದಿಂದ ಚಿತ್ರೀಕರಣ ಆರಂಭವಾಗಿದೆ. ಪಾತ್ರಪೋಷಣೆಗೆ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗಿದೆ.</p>.<p>ಕರ್ಣ, ‘ಸೋಡಾಬುಡ್ಡಿ’ಯ ಖುಷಿ ಮತ್ತು ಅಚ್ಯುತಕುಮಾರ್ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಹರ್ಷ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಅಭಿಷೇಕ್ ಕಾರಸಗೋಡು ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನ ಇರಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸೆಕೆಂಡು ಬಕೆಟು ಬಾಲ್ಕನಿ’ ಇದು ಸಿನಿಮಾ ಶೀರ್ಷಿಕೆ. ವಿಚಿತ್ರವಾಗಿ ಧ್ವನಿಸುವ ಶೀರ್ಷಿಕೆಯ ಈ ಸಿನಿಮಾದಲ್ಲಿ ಹೇಳಲು ಹೊರಟಿರುವ ಕಥೆಯೂ ವಿಶೇಷವೇ. ಶೀರ್ಷಿಕೆಯಲ್ಲಿರುವ ಮೂರೂ ಶಬ್ದಗಳು ಚಿತ್ರಮಂದಿರಕ್ಕೆ ಸಂಬಂಧಿಸಿವೆ. ‘ಲವ್ ಇನ್ ಮಂಡ್ಯ’ ನಿರ್ದೇಶಕ ಅರಸು ಅಂತಾರೆ ತಮ್ಮ ಎರಡನೇ ಪ್ರಯತ್ನದಲ್ಲಿ ಇಂಥದ್ದೊಂದು ಹೊಸ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ.<br /> <br /> ‘ಬಾಲ್ಕನಿ, ಸೆಕೆಂಡು ಮತ್ತು ಬಕೆಟ್ ಎಂದು ಚಿತ್ರಮಂದಿರದಲ್ಲಿನ ಆಸನ ವ್ಯವಸ್ಥೆಯನ್ನು ಕರೆಯಲಾಗುತ್ತದೆ. ಸಿನಿಮಾ ಪರದೆಯ ಎದುರು ಬೆಂಕಿ ಆಕಸ್ಮಿಕ ತಡೆಗಟ್ಟಲು ಮರಳು ತುಂಬಿ ಇಡಲಾಗುತ್ತಿದ್ದ ಕೆಂಪು ಬಕೆಟ್ಗಳ ಕಡೆಯಿಂದ ಬಕೆಟ್ ಕ್ಲಾಸ್ ಶುರು. ನಂತರ ಸೆಕೆಂಡು, ಆಮೇಲೆ ಬಾಲ್ಕನಿ. ಮೈಸೂರು, ಮಂಡ್ಯದಲ್ಲಿ ಇನ್ನೂ ಈ ವ್ಯವಸ್ಥೆ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ಅಂತಾರೆ.<br /> <br /> ಇದು ಚಿತ್ರಮಂದಿರಗಳ ಹೊರಗೆ ಬ್ಲ್ಯಾಕ್ ಟಿಕೆಟ್ ಮಾರುವವರು ಮತ್ತು ಜನರಿಗೆ ಸಂಬಂಧಿಸಿದ ಚಿತ್ರವಂತೆ. ಮೈಸೂರಿನಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತರಾಗಿ ಅರಸು ಕಥೆ ಬರೆದಿದ್ದಾರೆ.<br /> <br /> ‘ಈ ಬ್ಲ್ಯಾಕ್ ಟಿಕೆಟ್ ಮಾರುವವರನ್ನು ನಾನು ಚಿಕ್ಕವನಿದ್ದಾಗಿನಿಂದಲೂ ಹತ್ತಿರದಿಂದ ಕಂಡಿದ್ದೇನೆ. ಅವರ ಜೀವನ ಶೈಲಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಇದು’ ಎಂದು ಹೇಳಿಕೊಂಡಿರುವ ಅರಸು ಈ ಚಿತ್ರವನ್ನು, ‘ಸಿನಿಮಾದಿಂದ ಸಿನಿಮಾಗೋಸ್ಕರ ಸಿನಿಮಾಗಾಗಿ’ ಅಂತಾರೆ.<br /> <br /> ಗಮನ ಸೆಳೆವ ಗೀತರಚನೆಕಾರ ಅರಸು ‘ಲವ್ ಇನ್ ಮಂಡ್ಯ’ದ ನಂತರ ಎರಡು ವರ್ಷಗಳ ಬಳಿಕ ಮತ್ತೆ ಅವರು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕಳೆದ ವಾರದಿಂದ ಚಿತ್ರೀಕರಣ ಆರಂಭವಾಗಿದೆ. ಪಾತ್ರಪೋಷಣೆಗೆ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗಿದೆ.</p>.<p>ಕರ್ಣ, ‘ಸೋಡಾಬುಡ್ಡಿ’ಯ ಖುಷಿ ಮತ್ತು ಅಚ್ಯುತಕುಮಾರ್ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಹರ್ಷ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಅಭಿಷೇಕ್ ಕಾರಸಗೋಡು ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನ ಇರಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>