ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೂ ₹ 3 ಲಕ್ಷ ಅನುದಾನ ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು. ಅನುದಾನ ನೀಡಿರುವ ಗಡಿನಾಡಿನ ಊರು, ಶಾಲೆಗಳ ವಿವರ ನೀಡಿದ ಶಾಸಕರು, ನಂತರ ಉಸ್ಸಪ್ಪಾ ಎನ್ನುತ್ತಾ ವೇದಿಕೆಯಲ್ಲಿ ಸುಖಾಸೀನರಾದರು. ಬಳಿಕ ಶಾಸಕರು ಅನುದಾನ ನೀಡಿದ ಶಾಲೆಗಳೆಲ್ಲವೂ ಖಾಸಗಿ ಒಡೆತನದವು ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಂಬ ಸುದ್ದಿ ಕೇಳಿ ಸಮ್ಮೇಳನದಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರು ಹೌಹಾರಿದರು.