ದಾವಣಗೆರೆ: ಅಗ್ರ ಶ್ರೇಯಾಂಕದ ಕಿಶನ್ ಗಂಗೊಳ್ಳಿ, ಮುಂಬೈನ ಧಾರಾವಿಯಲ್ಲಿ ನಡೆದ ದೃಷ್ಟಿದೋಷವುಳ್ಳವರ 12ನೇ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದು ಕೊಂಡರು. ಶನಿವಾರ ಮುಕ್ತಾಯಗೊಂಡ ಒಟ್ಟು 13 ಸುತ್ತುಗಳಿಂದ 10.5 ಅಂಕ ಸಂಗ್ರಹಿಸಿದರು.
ಶಿವಮೊಗ್ಗದ ಕಿಶನ್ (ರೇಟಿಂಗ್: 1973) ಆಡಿದ 13 ಪಂದ್ಯಗಳಲ್ಲಿ 9 ಗೆದ್ದು, ಮೂರು ಡ್ರಾ ಮಾಡಿಕೊಂಡು ಒಂದರಲ್ಲಿ ಸೋಲನುಭ ವಿಸಿದರು. ಕಿಶನ್ ಈ ಹಿಂದೆ 2013, 2014, 2016 ರಲ್ಲಿ ಈ ಚಾಂಪಿಯನ್ಷಿಪ್ನಲ್ಲಿ ವಿಜೇತರಾಗಿದ್ದರು.
ಈ ಕೂಟದಲ್ಲಿ ಮೊದಲ ಐದು ಸ್ಥಾನ ಗಳಿಸಿದವರು ಮೆಸಿಡೋನಿಯಾದ ಸ್ಕೋಪೆ ಯಲ್ಲಿ ಮುಂದಿನ ಜೂನ್ನಲ್ಲಿ ನಡೆಯಲಿರುವ ದೃಷ್ಟಿದೋಷ ವುಳ್ಳವರ ಒಲಿಂಪಿಯಾಡ್ನಲ್ಲಿ ಭಾಗವಹಿಸುವ ಅರ್ಹತೆ ಪಡೆದರು.
ಕರ್ನಾಟಕದ ಆಟಗಾರ ರಾದ ಶ್ರೀಕೃಷ್ಣ ಉಡುಪ (4.5 ಅಂಕ) ನಾಲ್ಕೂವರೆ ಅಂಕ ಗಳೊಂದಿಗೆ 11ನೇ ಸ್ಥಾನ ಮತ್ತು ಶಶಿಧರ ಕೆ.ಎಂ. (4 ಅಂಕ) 12ನೇ ಸ್ಥಾನ ಪಡೆದರು.