ಸ್ಕೈಡೈವಿಂಗ್, ಪ್ಯಾರಾಗ್ಲೈಡಿಂಗ್, ಏರ್ ಬಲೂನ್ ರೈಡ್, ಹ್ಯಾಂಗ್ಗ್ಲೈಡಿಂಗ್, ಜಾಯ್ ರೈಡ್, ಪ್ಯಾರಾ ಸೇಲಿಂಗ್ ಸೇರಿದಂತೆ ಹಲವು ಸಾಹಸ ಕ್ರೀಡೆಗಳನ್ನು ನಿತ್ಯ ಆಯೋಜಿಸಲಿದೆ.
‘ನಿರ್ದಿಷ್ಟ ಶುಲ್ಕ ನೀಡಿ ಕ್ರೀಡಾಪಟುಗಳು, ಪ್ರವಾಸಿಗರು ಸೇರಿದಂತೆ ಯಾರು ಬೇಕಾದರೂ ಈ ಸೇವೆ ಬಳಸಿಕೊಳ್ಳಬಹುದು. ವಿಮಾನ ನಿಲ್ದಾಣ ಬಳಸಿಕೊಳ್ಳಲು ಅನುಮತಿ ಕೋರಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ.
ಏರೋ ಕ್ರೀಡೆ ಆಯೋಜಿಸಲು ಮೈಸೂರು ನೆಚ್ಚಿನ ಹಾಗೂ ಸುರಕ್ಷಿತ ವಲಯ’ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್ರಾಜ್ ಸಿಂಗ್ ಪ್ರತಿಕ್ರಿಯಿಸಿದರು.
ಈಜುವಾಗ ಸಂಭವಿಸಿದ ಅವಘಡದಲ್ಲಿ ಕಾಸರಗೋಡಿನ ರಘುರಾಮ್ ಅವರು ಭುಜದ ಕೆಳಗಿನ ಭಾಗದಲ್ಲಿ ಸ್ವಾಧೀನ ಕಳೆದುಕೊಂಡಿದ್ದಾರೆ. ವ್ಹೀಲ್ಚೇರ್ನಲ್ಲೇ ಅವರ ತಿರುಗಾಟ. 30 ವರ್ಷ ವಯಸ್ಸಿನ ರಘುರಾಮ್ ಅವರೊಂದಿಗಿನ ಸಂದರ್ಶನ ಇಲ್ಲಿದೆ.
-ಸಮರ್ಥರಿಗೇ ಸವಾಲಾಗಿರುವ ಸ್ಕೈಡೈವಿಂಗ್ನತ್ತ ಒಲವು ಮೂಡಲು ಕಾರಣ?
ಅವಘಡದಿಂದ ಸ್ವಾಧೀನ ಕಳೆದುಕೊಂಡು 11 ವರ್ಷಗಳಾಗಿವೆ. ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತನಾಗಿದ್ದೆ. ಹೀಗೆ ಎಷ್ಟು ದಿನ ಬದುಕಬೇಕು ಎಂಬ ಯೋಚನೆಯಲ್ಲಿ ನಿರತನಾಗಿದ್ದಾಗ ವಾಹಿನಿಯೊಂದರಲ್ಲಿ ನಟ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇ ಕಾರ್ಯಕ್ರಮ ನನ್ನ ಬದುಕಿಗೆ ತಿರುವು ನೀಡಿತು. ಕಾರ್ಯಕ್ರಮದಲ್ಲಿ ಅಂಗವಿಕಲರೊಬ್ಬರು ನೀಡಿದ ಪ್ರದರ್ಶನ ನನ್ನ ಕಣ್ಣು ತೆರೆಸಿತು. ಅಂತರ್ಜಾಲ ಮೂಲಕ ಸ್ಕೈಡೈವಿಂಗ್ ಸಾಹಸದ ಬಗ್ಗೆ ತಿಳಿದುಕೊಂಡೆ.
-ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಲ್ಲಿ ಯಾವ ರೀತಿ ನಂಬಿಕೆ ಮೂಡಿಸಿದಿರಿ?
ಸ್ಕೈಡೈವಿಂಗ್ ಜಂಪ್ ಮಾಡುತ್ತೇನೆ ಎಂದು ಹೇಳಿದಾಗ ಕೆಲವರು ನಗು ಬೀರಿದ್ದು ನಿಜ. ಆದರೆ, ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ. ಸಮಸ್ಯೆ ಇರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ತರಬೇತಿ ವೇಳೆ ಮಾರ್ಗದರ್ಶಕರ ನಿರೀಕ್ಷೆಗೆ ಸ್ಪಂದಿಸಿ ಅವರ ಮನಸ್ಸು ಗೆದ್ದೆ. ಅಂಗವಿಕಲರಿಂದಲೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟೆ.
-ಸ್ಕೈಡೈವಿಂಗ್ ಜಂಪ್ಗೆ ಯಾವ ರೀತಿ ಸಿದ್ಧತೆ ನಡೆಸಿದಿರಿ?
ಬರೋಬ್ಬರಿ ಎರಡು ವರ್ಷ ತರಬೇತಿಯಲ್ಲಿ ಪಾಲ್ಗೊಂಡೆ. ವೈದ್ಯರ ಸಲಹೆ ಪಡೆದೆ. ಸ್ಕೈಡೈವಿಂಗ್ ವಿಡಿಯೊ ವೀಕ್ಷಿಸಿ ಸಿದ್ಧತೆ ನಡೆಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಬಳಿ ಧೈರ್ಯ ಹಾಗೂ ಛಲವಿತ್ತು. ಅಸ್ತಿತ್ವಕ್ಕೆ ಹೋರಾಟ ಎಂದಾಗ ಯಾವುದೇ ರೀತಿಯ ಭಯ ಇರೋದಿಲ್ಲ.
-ಈ ಸಾಹಸಕ್ಕಿಳಿಯಲು ಮುಂದಾದಾಗ ಕುಟುಂಬದವರಿಂದ ವಿರೋಧ ವ್ಯಕ್ತವಾಗಲಿಲ್ಲವೇ?
ಆರಂಭದಲ್ಲಿ ಪೋಷಕರಾದ ಸುಬ್ಬಣ್ಣ ಭಟ್ ಹಾಗೂ ಕಾವೇರಿ ಭಟ್ ವಿರೋಧ ವ್ಯಕ್ತಪಡಿಸಿದ್ದು ನಿಜ. ಏಕೆಂದರೆ, ಸ್ಕೈಡೈವಿಂಗ್ ಸಾಹಸವೇ ಅಂಥದ್ದು. ಅವರಂತೂ ತುಂಬಾ ಭಯಪಟ್ಟರು. ಇದು ಸಹಜ ಕೂಡ. ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆ. ನನ್ನ ಸಾಧನೆ ಕಂಡ ಅವರು ಈಗ ಖುಷಿಪಡುತ್ತಿದ್ದಾರೆ.
-ಸ್ಕೈಡೈವಿಂಗ್ ಸಾಹಸದ ಅನುಭವ ಹೇಗಿತ್ತು?
ರೋಮಾಂಚನ ಉಂಟು ಮಾಡಿತು ಎನ್ನುವುದಕ್ಕಿಂತ ನನ್ನ ಕನಸು ಈಡೇರಿದ ಕ್ಷಣವದು. ಆ ಅನುಭವವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಆ ಕ್ಷಣಕ್ಕೆ ನನ್ನ ಅಂಗವೈಕಲ್ಯ ಮರೆತು ಹೋಗಿತ್ತು. ನಾನು ಯಾರಿಗಿಂತ ಕಡಿಮೆಯೇನಲ್ಲ ಎಂಬ ಭಾವನೆ ಬಂತು.
-ಸ್ಕೈಡೈವಿಂಗ್ ಕನಸು ಈಡೇರಿದೆ. ಮುಂದೆ?
ಸ್ಕೈಡೈವಿಂಗ್ ಜಂಪ್ ಪೂರೈಸಿದ ಮೇಲೆ ನನ್ನ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ನನಗೂ ನನ್ನ ಮೇಲೆ ವಿಶ್ವಾಸ ದುಪ್ಪಟ್ಟಾಗಿದೆ. ಹೀಗೆಯೇ, ಬೇರೆ ಬೇರೆ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತೇನೆ. ವ್ಹೀಲ್ಚೇರ್ ಆಚೆಗೂ ಜಗತ್ತು ಇದೆ ಎಂದು ತೋರಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.