ಮಕ್ಕಳ ಮೇಲಿನ ವಿಪರೀತ ವ್ಯಾಮೋಹದಿಂದ ಏನನ್ನು ಬೇಕಾದರೂ ಮಾಡಲು ತಯಾರಿರುವ ತಂದೆ-ತಾಯಿಯಿರುವ ಈ ಕಾಲದಲ್ಲಿ, ಸೋದರ ಪ್ರೇಮವನ್ನು ಮರೆಯದೆ ತಮ್ಮ ಮಗನನ್ನೇ ಎದುರು ಹಾಕಿಕೊಂಡವರು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್.
ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸದೇ ಇದ್ದರೂ, ಸಹೋದರ ಶಿವಪಾಲ್ ಸಿಂಗ್ ಮೇಲಿನ ಪ್ರೀತಿಯಿಂದ ಎರಡು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ತಮ್ಮನ ಗೆಲುವಿಗೆ ಕಾರಣರಾಗಿದ್ದಾರೆ. ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪನನ್ನು ಸೋಲಿಸಲು ಶತ ಪ್ರಯತ್ನ ಮಾಡಿದರೂ, ಮುಲಾಯಂ ಅವರ ಸೋದರ ಪ್ರೇಮದಿಂದ ಅದು ವಿಫಲವಾಗಿದೆ.
ಇತ್ತೀಚಿನ ದಿನಗಳಲ್ಲಿ ಅಣ್ಣ-ತಮ್ಮಂದಿರ ನಡುವೆ ದ್ವೇಷ, ಜಗಳ, ಮತ್ಸರಗಳೇ ಹೆಚ್ಚಾಗಿರುವಾಗ, ಇದೊಂದು ಮಾದರಿ ಬಾಂಧವ್ಯವಾಗಿ ಕಾಣುತ್ತದೆ.
-ಡಾ. ಪುನೀತ್ ಕುಮಾರ್ ಎಲ್.ಎಂ., ರಾಮನಗರ