‘ಮಕ್ಕಳ ಬದುಕಿಗೆ ಆಸರೆಯಾಗುವುದು, ಪಾಲನೆ–ಪೋಷಣೆ ಮಾಡುವುದು ಸಹಜ. ಅದರಂತೆ ಪ್ರಾಣಿ–ಪಕ್ಷಿಗಳ ಬದುಕಿಗೆ ಸ್ವಲ್ಪ ಆಸರೆಯಾದರೆ ಮನುಷ್ಯನ ಬದುಕು ಸಾರ್ಥಕವಾಗುತ್ತದೆ’ ಎಂದು ರೈತ ಅಶೋಕ ಕಬನೂರ ಹೇಳುತ್ತಾರೆ. ಇದಲ್ಲದೇ ಅವರು ಪಕ್ಷಿಗಳಿಗೆ ಆಹಾರದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಮಡಿಕೆ–ಪಾತ್ರೆಗಳಲ್ಲಿ ಜೋಳ, ರಾಗಿ, ಗೋಧಿ, ಗೋವಿನಜೋಳವನ್ನು ಈ ಹೊಂಡದ ಸುತ್ತಲು ಇಟ್ಟಿದ್ದಾರೆ. ಪಕ್ಷಿಗಳು ಬಂದು ಕಾಳು ತಿಂದು, ನೀರು ಕುಡಿದು ಹೋಗುತ್ತವೆ. ಅವರ ಮನೆಯ ಅಂಗಳದಲ್ಲಿ, ಹಿತ್ತಲಲ್ಲಿ, ಕಾಂಪೌಂಡ್ ಮೇಲೆ, ಮನೆ ಚಾವಣಿ ಮೇಲೆ ನೀರಿನ ಮತ್ತು ಆಹಾರ ಧಾನ್ಯಗಳ ಮಡಿಕೆ –ಪಾತ್ರೆಗಳನ್ನು ಇಡಲಾಗಿದೆ.