ಆಹಾರ ಪೂರೈಕೆ ಬಗ್ಗೆ ಸರ್ಕಾರದ ಭರವಸೆ
ಬೆಂಗಳೂರು, ಮಾ. 15– ಆಹಾರೋತ್ಪಾದನೆಯನ್ನು ಹೆಚ್ಚಿಸಿ ಬೆಲೆಗಳನ್ನು ಇಳಿಸಲು ಅಗತ್ಯವಾದ ಸೂಕ್ತ ಮಾರ್ಗಗಳನ್ನು ಕಂಡುಹಿಡಿಯಲು ತೀವ್ರ ಪ್ರಯತ್ನ ನಡೆಯುತ್ತಿದೆಯೆಂದು ರಾಜ್ಯಪಾಲ ಶ್ರೀ ವಿ.ವಿ. ಗಿರಿಯವರು ಇಂದು ಉಭಯ ಸದನಗಳ ಸದಸ್ಯರಿಗೆ ತಿಳಿಸಿದರು.
ವಿಧಾನಸಭಾಧ್ಯಕ್ಷರಾಗಿ ಶ್ರೀ ವೈಕುಂಠ ಬಾಳಿಗಾ ಅವರ ಪುನರಾಯ್ಕೆ
ಬೆಂಗಳೂರು, ಮಾ. 15– ಇಂದು ಇಲ್ಲಿ ಸಮಾವೇಶಗೊಂಡ ನೂತನ ಶಾಸನ ಸಭೆಯು ಶ್ರೀ ವೈಕುಂಠ ಬಾಳಿಗಾರವರನ್ನು ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಿತು.