ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಮಿಕರು ಗುರುವಾರ ರಸ್ತೆ ಅಗೆದು, ಮ್ಯಾನ್ಹೋಲ್ಗೆ ಇಳಿದು ಒಳಗೆ ತುಂಬಿದ್ದ ಕಾಂಕ್ರಿಟ್ ತೆಗೆದಿದ್ದಾರೆ. ಆದರೆ, ಮ್ಯಾನ್ಹೋಲ್ ಸ್ವಚ್ಛತಾ ಕಾರ್ಯದ ವೇಳೆ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸಿರಲಿಲ್ಲ. ಅಲ್ಲದೆ, ಯಾವುದೇ ಮುಂಜಾಗ್ರತಾ ಕ್ರಮವನ್ನೂ ಕೈಗೊಳ್ಳದೆ ಕಾರ್ಮಿಕರನ್ನು ಮ್ಯಾನ್ಹೋಲ್ಗೆ ಇಳಿಸಲಾಗಿದೆ.