<div> ‘‘ವೇಶ್ಯಾವಾಟಿಕೆ ನನ್ನನ್ನು ಯಾವತ್ತೂ ಕಾಡುವ ಸಂಗತಿಯಾಗಿತ್ತು. ಅಲ್ಲಿನ ಜನರ ಬದುಕು, ಅವರನ್ನು ನೋಡುವ ಸಮಾಜದ ದೃಷ್ಟಿಕೋನ ಎಲ್ಲವನ್ನೂ ಇಟ್ಟುಕೊಂಡು ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾದಲ್ಲಿ ಅನಾವರಣಗೊಳಿಸಿದ್ದೇವೆ. ನಮ್ಮ ಶ್ರಮ ಮತ್ತು ಕಾಳಜಿಗೆ ಪ್ರತಿಫಲವಾಗಿ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ದೊರಕಿದೆ. ಇದರಿಂದ ನಮಗೇನೂ ಬೇಸರವಿಲ್ಲ’’.<br /> <div> ಮಾತಿನಲ್ಲಿ ಬೇಸರವಿಲ್ಲ ಎಂದು ಹೇಳಿದರೂ ‘ಉರ್ವಿ’ ಸಿನಿಮಾದ ನಿರ್ದೇಶಕ ಪ್ರದೀಪ್ ವರ್ಮ ಅವರ ಧ್ವನಿಯಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು. ‘ವೇಶ್ಯೆಯರ ಬದುಕನ್ನು ಮುಖ್ಯವಾಹಿನಿಯಲ್ಲಿ ತೋರಿಸುವುದೇ ತಪ್ಪೇ’ ಎಂಬ ಪ್ರಶ್ನೆಯೂ ಅವರನ್ನು ಕಾಡಿದೆ.<br /> </div><div> ಕಳೆದ ಒಂದು ವರ್ಷದ ಅವರ ಕನಸು ‘ಉರ್ವಿ’ ಇಂದು (ಮಾರ್ಚ್ 17) ಬಿಡುಗಡೆಯಾಗುತ್ತಿದೆ. ‘ಸಮಾಜದಲ್ಲಿ ತಮ್ಮ ಬದುಕಿನಲ್ಲಿ ಎದುರಾದ ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸಿ ಬದುಕುವ ಮೂವರು ಹೆಣ್ಣುಮಕ್ಕಳ ಕಥೆ ಇದು’ ಎಂದು ನಿರ್ದೇಶಕರು ‘ಉರ್ವಿ’ಯನ್ನು ವ್ಯಾಖ್ಯಾನಿಸುತ್ತಾರೆ.</div><div> </div><div> ಈ ಸಿನಿಮಾದ ಮೂವರು ಹೆಣ್ಣುಮಕ್ಕಳು ದೇವಿ ದುರ್ಗಿಯ ಕೈಯ ತ್ರಿಶೂಲದ ಮೂರು ಮೊನೆಗಳನ್ನು ಸಂಕೇತಿಸುತ್ತಾರಂತೆ. ‘ಯುಕ್ತಿ ಭಕ್ತಿ ಶಕ್ತಿ–ಈ ಮೂರನ್ನು ಹತೋಟಿಯಲ್ಲಿಟ್ಟುಕೊಂಡಾಗ ನಾವು ಪರಿಪೂರ್ಣ ವ್ಯಕ್ತಿಯಾಗುತ್ತೇವೆ. ಇದನ್ನೇ ಸಿನಿಮಾದಲ್ಲಿ ಹೇಳಹೊರಟಿದ್ದೇವೆ’ ಎಂದು ಪ್ರದೀಪ್ ವಿವರಿಸಿದರು.</div><div> </div><div> ವೇಶ್ಯಾವಾಟಿಕೆಯ ಕಗ್ಗತ್ತಲ ಲೋಕವನ್ನು ಚಿತ್ರದಲ್ಲವರು ಅನಾವರಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿರುವ ಪಾತ್ರಕ್ಕೆ ‘ಚಂದ್ರಿಕಾ’ ಎಂಬ ಕಾಮಾಟಿಪುರದ ಹೆಣ್ಣುಮಗಳೇ ಸ್ಫೂರ್ತಿಯಂತೆ.</div><div> </div><div> ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್ ಹಾಗೂ ಶ್ವೇತಾ ಪಂಡಿತ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಚ್ಯುತ್ಕುಮಾರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಭವಾನಿ ಪ್ರಕಾಶ್ ವಿಶೇಷ ಪಾತ್ರಕ್ಕೆ ಜೀವತುಂಬಿದ್ದಾರೆ.</div><div> </div><div> ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಶ್ವೇತಾ ಪಂಡಿತ್ ‘ನಾವು ಹೆಣ್ಣು ಎಂಬ ಕಾರಣಕ್ಕೆ ಕೆಲವು ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಅಂಥ ಪರಿಸ್ಥಿತಿಗಳ ಕುರಿತಾದ ಸಿನಿಮಾ ಇದು. ನನ್ನ ಬದುಕಿಗೆ–ಮನಸ್ಸಿಗೆ ಹತ್ತಿರವಾದ ಪಾತ್ರ’ ಎಂದು ಹೇಳಿದರು.</div><div> </div><div> ಇನ್ನೋರ್ವ ನಟ ಮಧುಕರ್ ಅವರೂ ಇದೊಂದು ವಿಭಿನ್ನವಾದ ಸಿನಿಮಾ ಎಂದು ಹೇಳಿ ಮಾತು ಮುಗಿಸಿದರು. ‘ರಾಮಾ ರಾಮಾ ರೇ...’ ಸಿನಿಮಾ ಸಂಗೀತ ನಿರ್ದೇಶಕ ವಾಸುಕಿ ವೈಭವ್ ‘ಉರ್ವಿ’ಯಲ್ಲಿ ನಟಿಸಿದ್ದಾರೆ. ಮನೋಜ್ ಜಾರ್ಜ್ ಸಂಗೀತ, ಆನಂದ್ ಸುಂದರೇಶ್ ಛಾಯಾಗ್ರಹಣ ಇರುವ ಈ ಸಿನಿಮಾವನ್ನು ಆರ್.ಪಿ. ಭಟ್ ನಿರ್ಮಿಸಿದ್ದಾರೆ. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> ‘‘ವೇಶ್ಯಾವಾಟಿಕೆ ನನ್ನನ್ನು ಯಾವತ್ತೂ ಕಾಡುವ ಸಂಗತಿಯಾಗಿತ್ತು. ಅಲ್ಲಿನ ಜನರ ಬದುಕು, ಅವರನ್ನು ನೋಡುವ ಸಮಾಜದ ದೃಷ್ಟಿಕೋನ ಎಲ್ಲವನ್ನೂ ಇಟ್ಟುಕೊಂಡು ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾದಲ್ಲಿ ಅನಾವರಣಗೊಳಿಸಿದ್ದೇವೆ. ನಮ್ಮ ಶ್ರಮ ಮತ್ತು ಕಾಳಜಿಗೆ ಪ್ರತಿಫಲವಾಗಿ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ದೊರಕಿದೆ. ಇದರಿಂದ ನಮಗೇನೂ ಬೇಸರವಿಲ್ಲ’’.<br /> <div> ಮಾತಿನಲ್ಲಿ ಬೇಸರವಿಲ್ಲ ಎಂದು ಹೇಳಿದರೂ ‘ಉರ್ವಿ’ ಸಿನಿಮಾದ ನಿರ್ದೇಶಕ ಪ್ರದೀಪ್ ವರ್ಮ ಅವರ ಧ್ವನಿಯಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು. ‘ವೇಶ್ಯೆಯರ ಬದುಕನ್ನು ಮುಖ್ಯವಾಹಿನಿಯಲ್ಲಿ ತೋರಿಸುವುದೇ ತಪ್ಪೇ’ ಎಂಬ ಪ್ರಶ್ನೆಯೂ ಅವರನ್ನು ಕಾಡಿದೆ.<br /> </div><div> ಕಳೆದ ಒಂದು ವರ್ಷದ ಅವರ ಕನಸು ‘ಉರ್ವಿ’ ಇಂದು (ಮಾರ್ಚ್ 17) ಬಿಡುಗಡೆಯಾಗುತ್ತಿದೆ. ‘ಸಮಾಜದಲ್ಲಿ ತಮ್ಮ ಬದುಕಿನಲ್ಲಿ ಎದುರಾದ ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸಿ ಬದುಕುವ ಮೂವರು ಹೆಣ್ಣುಮಕ್ಕಳ ಕಥೆ ಇದು’ ಎಂದು ನಿರ್ದೇಶಕರು ‘ಉರ್ವಿ’ಯನ್ನು ವ್ಯಾಖ್ಯಾನಿಸುತ್ತಾರೆ.</div><div> </div><div> ಈ ಸಿನಿಮಾದ ಮೂವರು ಹೆಣ್ಣುಮಕ್ಕಳು ದೇವಿ ದುರ್ಗಿಯ ಕೈಯ ತ್ರಿಶೂಲದ ಮೂರು ಮೊನೆಗಳನ್ನು ಸಂಕೇತಿಸುತ್ತಾರಂತೆ. ‘ಯುಕ್ತಿ ಭಕ್ತಿ ಶಕ್ತಿ–ಈ ಮೂರನ್ನು ಹತೋಟಿಯಲ್ಲಿಟ್ಟುಕೊಂಡಾಗ ನಾವು ಪರಿಪೂರ್ಣ ವ್ಯಕ್ತಿಯಾಗುತ್ತೇವೆ. ಇದನ್ನೇ ಸಿನಿಮಾದಲ್ಲಿ ಹೇಳಹೊರಟಿದ್ದೇವೆ’ ಎಂದು ಪ್ರದೀಪ್ ವಿವರಿಸಿದರು.</div><div> </div><div> ವೇಶ್ಯಾವಾಟಿಕೆಯ ಕಗ್ಗತ್ತಲ ಲೋಕವನ್ನು ಚಿತ್ರದಲ್ಲವರು ಅನಾವರಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿರುವ ಪಾತ್ರಕ್ಕೆ ‘ಚಂದ್ರಿಕಾ’ ಎಂಬ ಕಾಮಾಟಿಪುರದ ಹೆಣ್ಣುಮಗಳೇ ಸ್ಫೂರ್ತಿಯಂತೆ.</div><div> </div><div> ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್ ಹಾಗೂ ಶ್ವೇತಾ ಪಂಡಿತ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಚ್ಯುತ್ಕುಮಾರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಭವಾನಿ ಪ್ರಕಾಶ್ ವಿಶೇಷ ಪಾತ್ರಕ್ಕೆ ಜೀವತುಂಬಿದ್ದಾರೆ.</div><div> </div><div> ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಶ್ವೇತಾ ಪಂಡಿತ್ ‘ನಾವು ಹೆಣ್ಣು ಎಂಬ ಕಾರಣಕ್ಕೆ ಕೆಲವು ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಅಂಥ ಪರಿಸ್ಥಿತಿಗಳ ಕುರಿತಾದ ಸಿನಿಮಾ ಇದು. ನನ್ನ ಬದುಕಿಗೆ–ಮನಸ್ಸಿಗೆ ಹತ್ತಿರವಾದ ಪಾತ್ರ’ ಎಂದು ಹೇಳಿದರು.</div><div> </div><div> ಇನ್ನೋರ್ವ ನಟ ಮಧುಕರ್ ಅವರೂ ಇದೊಂದು ವಿಭಿನ್ನವಾದ ಸಿನಿಮಾ ಎಂದು ಹೇಳಿ ಮಾತು ಮುಗಿಸಿದರು. ‘ರಾಮಾ ರಾಮಾ ರೇ...’ ಸಿನಿಮಾ ಸಂಗೀತ ನಿರ್ದೇಶಕ ವಾಸುಕಿ ವೈಭವ್ ‘ಉರ್ವಿ’ಯಲ್ಲಿ ನಟಿಸಿದ್ದಾರೆ. ಮನೋಜ್ ಜಾರ್ಜ್ ಸಂಗೀತ, ಆನಂದ್ ಸುಂದರೇಶ್ ಛಾಯಾಗ್ರಹಣ ಇರುವ ಈ ಸಿನಿಮಾವನ್ನು ಆರ್.ಪಿ. ಭಟ್ ನಿರ್ಮಿಸಿದ್ದಾರೆ. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>