ಮಳೆಗಾಲಕ್ಕೆ ಇನ್ನೂ ಬಹಳಷ್ಟು ದಿನಗಳು ಇರುವಾಗಲೇ ಎಲ್ಲಿ ನೋಡಿದರಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಕೆರೆ– ಕಾಲುವೆಗಳು ಬತ್ತಿ ಹೋಗಿವೆ. ಅಡವಿಗಳಲ್ಲಿ ನೀರು ಮತ್ತು ಮೇವಿನ ಕೊರತೆಯಿಂದಾಗಿ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನೀರಿನ ಮಿತಬಳಕೆ ಬಗ್ಗೆ, ಜಲಮೂಲಗಳ ಸಂರಕ್ಷಣೆಗಾಗಿ ನಾವು ಬಿಗಿ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ.
ನೀರನ್ನು ಅತಿ ಜಾಗರೂಕತೆಯಿಂದ ಬಳಸುವ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ. ಬಳಸಿದ ನೀರನ್ನು ಹಾಳು ಮಾಡದೆ ಹೂಗಿಡಗಳಿಗೆ ಹಾಕುವುದು, ಮಳೆ ನೀರನ್ನು ಸಂಗ್ರಹಿಸುವುದು, ನಲ್ಲಿಗಳಲ್ಲಿ ನೀರಿನ ಅನವಶ್ಯಕ ಸೋರುವಿಕೆ ತಡೆಗಟ್ಟುವುದು.