ಅನುಭವಿ ಕಲಾವಿದರಾದ ಸೌಮ್ಯಲತಾ, ಆನಂದ್ ನಾಗರ್ಕರ್ ಮತ್ತು ಮುತ್ತುರಾಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೊಸ ಪ್ರತಿಭೆಗಳಾದ ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ಅವರನ್ನು ಈ ಧಾರಾವಾಹಿಯಲ್ಲಿ ಪರಿಚಯಿಸಲಾಗಿದೆ. ಸಕ್ಕರೆಬೈಲು ಶ್ರೀನಿವಾಸ್ ನಿರ್ದೇಶನದ ‘ಸಿಂದೂರ’ಕ್ಕೆ ಕ್ಯಾಮೆರಾ ಹಿಡಿದವರು ನಿಂಗೇಗೌಡ ಮಾರನಹಳ್ಳಿ. ಸಂಕಲನಕಾರರಾಗಿ ನರಸಿಂಹ ಕೆಲಸ ಮಾಡಿದ್ದಾರೆ.