<div> <strong>ಪಾಂಡಿಚೆರಿ ಸರ್ಕಾರದ ರಾಜೀನಾಮೆ</strong><div> <strong>ಪಾಂಡಿಚೆರಿ, ಮಾ. 19– </strong>ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯ ಕಾಂಗ್ರೆಸ್ ಸಂಪುಟವು ಇಂದು ರಾಜೀನಾಮೆ ಸಲ್ಲಿಸಿತು. ಮುಖ್ಯಮಂತ್ರಿ ವಿ. ವೆಂಕಟಸುಬ್ಬ ರೆಡ್ಡಿಯಾರ್ರವರು ತಮ್ಮ ಸಂಪುಟದ ರಾಜೀನಾಮೆಯನ್ನು ಲೆಫ್ಟಿನೆಂಟ್ ಗೌರ್ನರ್ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದರು.<br /> </div><div> ನಾಲ್ಕು ಮಂದಿ ಸಚಿವರಲ್ಲಿ ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದರಿಂದ ಸಂಪುಟದ ರಾಜೀನಾಮೆಯನ್ನು ಸಲ್ಲಿಸುತ್ತಿರುವುದಾಗಿ ಮುಖ್ಯಮಂತ್ರಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.<br /> </div><div> <strong>ಎಲ್ಲಿ ಭರವಸೆ?</strong></div><div> <strong>ಮದ್ರಾಸ್, ಮಾ. 19– </strong>‘ರೂಪಾಯಿಗೆ ಮೂರು ಸೇರು ಅಕ್ಕಿ ಯಾವಾಗ ಸಿಗುವುದು?’ ಮದ್ರಾಸ್ ವಿಧಾನ ಸಭೆಯಲ್ಲಿ ಶನಿವಾರ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಮತ್ತೆ ಮತ್ತೆ ಸರಕಾರಕ್ಕೆ ಕೇಳಿದ ಪ್ರಶ್ನೆಯಿದು.<br /> <br /> ಚುನಾವಣೆಗೆ ಮೊದಲು ಡಿ.ಎಂ.ಕೆ. ಪಕ್ಷವು ಅಕ್ಕಿ ಬೆಲೆ ಇಳಿಸಿ ರೂಪಾಯಿಗೆ ಮೂರು ಸೇರಿನಂತೆ ಅಕ್ಕಿ ದೊರಕಿಸುವುದಾಗಿ ಆಶ್ವಾಸನೆ ನೀಡಿದ್ದನ್ನು ಅವರು ಉಲ್ಲೇಖಿಸುತ್ತಿದ್ದರು. ತಾಳ್ಮೆಯಿಂದಿರಲು ಡಿ.ಎಂ.ಕೆ. ಸದಸ್ಯರು ಕಾಂಗ್ರೆಸ್ಸಿಗರಿಗೆ ಹೇಳಿದರು. ಭರವಸೆಯನ್ನು ‘ಕಾಲಕ್ರಮದಲ್ಲಿ ನೆರವೇರಿಸಲಾಗುವುದು’ ಎಂದು ಉತ್ತರಿಸಿದರು.<br /> </div><div> <strong>ಪಾಳೇಗಾರರು</strong></div><div> <strong>ನವದೆಹಲಿ, ಮಾ. 19– </strong> ‘ಪಾಳೇಗಾರಿಕೆಯ ಆರೋಪ 20 ವರ್ಷಗಳ ಹಿಂದೆಯೇ ನಿರ್ನಾಮವಾಗಿರುವ ಮಾಜಿ ರಾಜರುಗಳಿಗಿಂತ ಕಾಂಗ್ರೆಸ್ಸಿಗೇ ಹೆಚ್ಚು ಸರಿ ಹೊಂದುತ್ತದೆ’</div><div> ಲೋಕಸಭೆಯಲ್ಲಿ ಮಹಾರಾಜ ಕರ್ಣಿಸಿಂಗ್ ಅವರ ಚಟಾಕಿ ಇದು.<br /> </div><div> ‘ಪಾಳೇಗಾರಿಕೆ ವ್ಯವಸ್ಥೆ ಮುಂದುವರಿಯುತ್ತಿದೆ ಎಂಬುದಕ್ಕೆ ಎರಡನೇ ಬಾರಿ ಪ್ರಧಾನಿಯಾಗಿ ಶ್ರೀಮತಿ ಇಂದಿರಾಗಾಂಧಿ ಆಯ್ಕೆಯಾದುದೇ ಸಾಕ್ಷಿ. ನೆಹರೂರ ಪುತ್ರಿಯಾದುದರಿಂದ ಮಾತ್ರವೇ ಕಾಂಗ್ರೆಸ್ ಅವರನ್ನು ಆಯ್ಕೆ ಮಾಡಿತು. ಅದಲ್ಲದಿದ್ದರೆ ಮುರಾರಜಿ ದೇಸಾಯ್ ಆಯ್ಕೆಯಾಗುತ್ತಿದ್ದರು’ ಎಂದು ಅವರು ನಿನ್ನೆ ಲೋಕಸಭೆಯಲ್ಲಿ ನುಡಿದರು.<br /> </div><div> <strong>ಯೋಜನೆ ಮಂಡಳಿ ಉಪಾಧ್ಯಕ್ಷರಾಗಿ ಶ್ರೀ ಬಿ.ಕೆ. ನೆಹರೂ</strong></div><div> <strong>ನವದೆಹಲಿ, ಮಾ. 19– </strong>ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಿ.ಕೆ. ನೆಹರೂರವರು ಮೇ ತಿಂಗಳ ಅಂತ್ಯದ ಅಥವಾ ಜೂನ್ ತಿಂಗಳ ಆರಂಭದ ಹೊತ್ತಿಗೆ ತಮ್ಮ ಹುದ್ದೆಗೆ ರಾಜೀನಾಮೆಯಿತ್ತು ಭಾರತಕ್ಕೆ ಹಿಂದಿರುಗುವ ನಿರೀಕ್ಷೆಯಿದೆ.<br /> </div><div> ಸಮಾಲೋಚನೆಗಾಗಿ ಈಗ ಇಲ್ಲಿಗೆ ಬಂದಿರುವ ಶ್ರೀ ನೆಹರೂರವರಿಗೆ ಪ್ರಮುಖ ಹುದ್ದೆಯೊಂದನ್ನು ನೀಡಲಾಗುವುದೆಂದು ಹೇಳಲಾಗುತ್ತಿದೆ. </div><div> </div><div> <strong>ಎಸ್.ಎಂ. ಬ್ಯಾನರ್ಜಿ ಲೋಕಸಭೆ ಕಮ್ಯುನಿಸ್ಟ್ ಗುಂಪಿನ ಮುಖ್ಯ ಸಚೇತಕ</strong></div><div> <strong>ನವದೆಹಲಿ, ಮಾ. 19– </strong> ಲೋಕಸಭೆಯಲ್ಲಿನ ಕಮ್ಯುನಿಸ್ಟ್ ಪಕ್ಷ (ಬಲ) ಗುಂಪಿನ ಮುಖ್ಯ ಸಚೇತಕರಾಗಿ ಎಸ್.ಎಂ. ಬ್ಯಾನರ್ಜಿಯವರು ಆಯ್ಕೆಯಾಗಿದ್ಶಾರೆ. ಪಕ್ಷೇತರರಾಗಿ ಚುನಾಯಿತರಾದ ಬ್ಯಾನರ್ಜಿಯವರು ಈಗ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿರುವುದರಿಂದ ಲೋಕಸಭೆಯಲ್ಲಿ ಪಕ್ಷದ ಬಲ 24ಕ್ಕೆ ಏರಿದೆ.</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಪಾಂಡಿಚೆರಿ ಸರ್ಕಾರದ ರಾಜೀನಾಮೆ</strong><div> <strong>ಪಾಂಡಿಚೆರಿ, ಮಾ. 19– </strong>ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯ ಕಾಂಗ್ರೆಸ್ ಸಂಪುಟವು ಇಂದು ರಾಜೀನಾಮೆ ಸಲ್ಲಿಸಿತು. ಮುಖ್ಯಮಂತ್ರಿ ವಿ. ವೆಂಕಟಸುಬ್ಬ ರೆಡ್ಡಿಯಾರ್ರವರು ತಮ್ಮ ಸಂಪುಟದ ರಾಜೀನಾಮೆಯನ್ನು ಲೆಫ್ಟಿನೆಂಟ್ ಗೌರ್ನರ್ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದರು.<br /> </div><div> ನಾಲ್ಕು ಮಂದಿ ಸಚಿವರಲ್ಲಿ ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದರಿಂದ ಸಂಪುಟದ ರಾಜೀನಾಮೆಯನ್ನು ಸಲ್ಲಿಸುತ್ತಿರುವುದಾಗಿ ಮುಖ್ಯಮಂತ್ರಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.<br /> </div><div> <strong>ಎಲ್ಲಿ ಭರವಸೆ?</strong></div><div> <strong>ಮದ್ರಾಸ್, ಮಾ. 19– </strong>‘ರೂಪಾಯಿಗೆ ಮೂರು ಸೇರು ಅಕ್ಕಿ ಯಾವಾಗ ಸಿಗುವುದು?’ ಮದ್ರಾಸ್ ವಿಧಾನ ಸಭೆಯಲ್ಲಿ ಶನಿವಾರ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಮತ್ತೆ ಮತ್ತೆ ಸರಕಾರಕ್ಕೆ ಕೇಳಿದ ಪ್ರಶ್ನೆಯಿದು.<br /> <br /> ಚುನಾವಣೆಗೆ ಮೊದಲು ಡಿ.ಎಂ.ಕೆ. ಪಕ್ಷವು ಅಕ್ಕಿ ಬೆಲೆ ಇಳಿಸಿ ರೂಪಾಯಿಗೆ ಮೂರು ಸೇರಿನಂತೆ ಅಕ್ಕಿ ದೊರಕಿಸುವುದಾಗಿ ಆಶ್ವಾಸನೆ ನೀಡಿದ್ದನ್ನು ಅವರು ಉಲ್ಲೇಖಿಸುತ್ತಿದ್ದರು. ತಾಳ್ಮೆಯಿಂದಿರಲು ಡಿ.ಎಂ.ಕೆ. ಸದಸ್ಯರು ಕಾಂಗ್ರೆಸ್ಸಿಗರಿಗೆ ಹೇಳಿದರು. ಭರವಸೆಯನ್ನು ‘ಕಾಲಕ್ರಮದಲ್ಲಿ ನೆರವೇರಿಸಲಾಗುವುದು’ ಎಂದು ಉತ್ತರಿಸಿದರು.<br /> </div><div> <strong>ಪಾಳೇಗಾರರು</strong></div><div> <strong>ನವದೆಹಲಿ, ಮಾ. 19– </strong> ‘ಪಾಳೇಗಾರಿಕೆಯ ಆರೋಪ 20 ವರ್ಷಗಳ ಹಿಂದೆಯೇ ನಿರ್ನಾಮವಾಗಿರುವ ಮಾಜಿ ರಾಜರುಗಳಿಗಿಂತ ಕಾಂಗ್ರೆಸ್ಸಿಗೇ ಹೆಚ್ಚು ಸರಿ ಹೊಂದುತ್ತದೆ’</div><div> ಲೋಕಸಭೆಯಲ್ಲಿ ಮಹಾರಾಜ ಕರ್ಣಿಸಿಂಗ್ ಅವರ ಚಟಾಕಿ ಇದು.<br /> </div><div> ‘ಪಾಳೇಗಾರಿಕೆ ವ್ಯವಸ್ಥೆ ಮುಂದುವರಿಯುತ್ತಿದೆ ಎಂಬುದಕ್ಕೆ ಎರಡನೇ ಬಾರಿ ಪ್ರಧಾನಿಯಾಗಿ ಶ್ರೀಮತಿ ಇಂದಿರಾಗಾಂಧಿ ಆಯ್ಕೆಯಾದುದೇ ಸಾಕ್ಷಿ. ನೆಹರೂರ ಪುತ್ರಿಯಾದುದರಿಂದ ಮಾತ್ರವೇ ಕಾಂಗ್ರೆಸ್ ಅವರನ್ನು ಆಯ್ಕೆ ಮಾಡಿತು. ಅದಲ್ಲದಿದ್ದರೆ ಮುರಾರಜಿ ದೇಸಾಯ್ ಆಯ್ಕೆಯಾಗುತ್ತಿದ್ದರು’ ಎಂದು ಅವರು ನಿನ್ನೆ ಲೋಕಸಭೆಯಲ್ಲಿ ನುಡಿದರು.<br /> </div><div> <strong>ಯೋಜನೆ ಮಂಡಳಿ ಉಪಾಧ್ಯಕ್ಷರಾಗಿ ಶ್ರೀ ಬಿ.ಕೆ. ನೆಹರೂ</strong></div><div> <strong>ನವದೆಹಲಿ, ಮಾ. 19– </strong>ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಿ.ಕೆ. ನೆಹರೂರವರು ಮೇ ತಿಂಗಳ ಅಂತ್ಯದ ಅಥವಾ ಜೂನ್ ತಿಂಗಳ ಆರಂಭದ ಹೊತ್ತಿಗೆ ತಮ್ಮ ಹುದ್ದೆಗೆ ರಾಜೀನಾಮೆಯಿತ್ತು ಭಾರತಕ್ಕೆ ಹಿಂದಿರುಗುವ ನಿರೀಕ್ಷೆಯಿದೆ.<br /> </div><div> ಸಮಾಲೋಚನೆಗಾಗಿ ಈಗ ಇಲ್ಲಿಗೆ ಬಂದಿರುವ ಶ್ರೀ ನೆಹರೂರವರಿಗೆ ಪ್ರಮುಖ ಹುದ್ದೆಯೊಂದನ್ನು ನೀಡಲಾಗುವುದೆಂದು ಹೇಳಲಾಗುತ್ತಿದೆ. </div><div> </div><div> <strong>ಎಸ್.ಎಂ. ಬ್ಯಾನರ್ಜಿ ಲೋಕಸಭೆ ಕಮ್ಯುನಿಸ್ಟ್ ಗುಂಪಿನ ಮುಖ್ಯ ಸಚೇತಕ</strong></div><div> <strong>ನವದೆಹಲಿ, ಮಾ. 19– </strong> ಲೋಕಸಭೆಯಲ್ಲಿನ ಕಮ್ಯುನಿಸ್ಟ್ ಪಕ್ಷ (ಬಲ) ಗುಂಪಿನ ಮುಖ್ಯ ಸಚೇತಕರಾಗಿ ಎಸ್.ಎಂ. ಬ್ಯಾನರ್ಜಿಯವರು ಆಯ್ಕೆಯಾಗಿದ್ಶಾರೆ. ಪಕ್ಷೇತರರಾಗಿ ಚುನಾಯಿತರಾದ ಬ್ಯಾನರ್ಜಿಯವರು ಈಗ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿರುವುದರಿಂದ ಲೋಕಸಭೆಯಲ್ಲಿ ಪಕ್ಷದ ಬಲ 24ಕ್ಕೆ ಏರಿದೆ.</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>