ಹಬ್ಬದ ಯಶಸ್ಸಿಗೆ ಟೊಂಕಕಟ್ಟಿ ನಿಂತು ಶಾಂತಿಯುತವಾಗಿ ಅದ್ಧೂರಿಯಿಂದ ಹಬ್ಬ ಆಚರಿಸುವಂತೆ ಸೇವೆ ಸಲ್ಲಿಸುವ ಹಿನ್ನೆಲೆಯಲ್ಲಿ ವಿಶೇಷ ಸಮಿತಿಯನ್ನು ಸಭೆಯಲ್ಲಿ ಒಮ್ಮತದಿಂದ ರಚಿಸಿ ಜವಾಬ್ದಾರಿ ನೀಡಲಾಯಿತು.
ಸಮಿತಿಯ ಪದಾಧಿಕಾರಿಗಳ ಮಾತುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಹಬ್ಬದ ಯಶಸ್ವಿಗೆ ಸಹಕರಿಸಲು ಸಭೆಯಲ್ಲಿ ಸೂಚಿಸಲಾಯಿತು.
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್್ ವ್ಯವಸ್ಥೆಗೊಳಿಸುವಂತೆ ಗ್ರಾಮಾಂತರ ಪೊಲೀಸರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಗೌರವ ಸಲಹೆಗಾರರು: ಎಸ್.ಸೋಮಣ್ಣ, ಕೆಂಪಯ್ಯ, ಮಹಾದೇವಯ್ಯ.
ಸದಸ್ಯರು: ಬಸವಣ್ಣ, ಗ.ಶಿವಣ್ಣ, ಸಿದ್ದರಾಜು (ಭಂಡಾರಿ ಗುರುಮಲ್ಲು), ಶಿವಶಂಕರ್, ಶಿವಮಲ್ಲು, ನಾರಾಯಣಸ್ವಾಮಿ, ಚಂದ್ರಕುಮಾರ್, ರಾಜಶೇಖರ್, ನಾಗರಾಜು, ಲಕ್ಷ್ಮಣ, ಹೊನ್ನಯ್ಯನ ಸಿದ್ದರಾಜು, ಕಾಳಯ್ಯ, ಮಂಟ್ಯ, ಎನ್.ರಾಜಣ್ಣ, ಜಿ.ಶಾಂತರಾಜು, ಉಮಾಶಂಕರ್, ಸಿದ್ದಪ್ಪಾಜಿ, ಕೆ.ಎಸ್.ಸುರೇಶ್, ದೇವರಾಜು ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.