ರಾಜ್ಯಗಳಿಗೆ ಇನ್ನು ರಿಸರ್ವ್ ಬ್ಯಾಂಕ್ ಓವರ್ ಡ್ರಾಫ್ಟ್ ಇಲ್ಲ
ನವದೆಹಲಿ, ಮಾ. 20– ‘ರಾಜ್ಯಗಳು ಅಧಿಕ ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ನಿಂದ ಪಡೆಯುತ್ತಿದ್ದ ಓವರ್ ಡ್ರಾಫ್ಟ್ಗಳ ಕಥೆ ಇನ್ನು ಮುಗಿದಂತೆಯೇ ಸರಿ’ ಎಂದು ಉಪ ಪ್ರಧಾನಿ ಹಾಗೂ ಅರ್ಥ ಸಚಿವ ಮುರಾರಜಿ ದೇಸಾಯಿಯವರು ಪಾರ್ಲಿಮೆಂಟ್ನಲ್ಲಿ 1967–68ರ ತಾತ್ಕಾಲಿಕ ಬಜೆಟ್ ಮಂಡಿಸುತ್ತಾ ತಿಳಿಸಿದರು.
ಶುಕ್ರವಾರ ರಾಜ್ಯ ಬಜೆಟ್ ಮಂಡನೆ
ಬೆಂಗಳೂರು, ಮಾ. 20– ರಾಜ್ಯದ ಮುಂದಿನ ಸಾಲಿನ ಬಜೆಟ್ಟನ್ನು ರಾಜ್ಯ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಶುಕ್ರವಾರದ ದಿನ ಮಂಡಿಸಲಾಗುವುದು. ಗುರುವಾರ ಮಂಡಿಸಲಾಗುವುದೆಂದು ಈ ಮೊದಲು ಪ್ರಕಟಿಸಲಾಗಿತ್ತು.
28ರಂದು ಲೋಕಸಭೆಉಪಾಧ್ಯಕ್ಷರ ಆಯ್ಕೆ
ನವದೆಹಲಿ, ಮಾ. 20– ಮಾರ್ಚಿ 28ರಂದು ಲೋಕಸಭೆಯ ಉಪಾಧ್ಯಕ್ಷರ ಆಯ್ಕೆಯಾಗಬೇಕೆಂದು ಸಭಾಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ನಿಗದಿ ಮಾಡಿದ್ದಾರೆ.