<p><strong>ದೇಶದ ತೀವ್ರ ಗಂಭೀರ ಆರ್ಥಿಕ ಪರಿಸ್ಥಿತಿ: ಮುರಾರಜಿ ನಿರೂಪಣೆ<br /> ನವದೆಹಲಿ, ಮಾ. 20–</strong> ರಫ್ತುಗಳು ಇಳಿಮುಖವಾಗುತ್ತಿರುವ, ವೆಚ್ಚವು ಹೆಚ್ಚಾಗುತ್ತಿರುವ ಮತ್ತು ಆಂತರಿಕ ಕೊರತೆಗಳು ಏಕಪ್ರಕಾರವಾಗಿರುವ ಗಂಭೀರ ಸ್ವರೂಪದ ಆರ್ಥಿಕ ಚಿತ್ರಣವನ್ನು ಉಪ ಪ್ರಧಾನಮಂತ್ರಿ ಮತ್ತು ಅರ್ಥ ಸಚಿವ ಶ್ರೀ ಮುರಾರಜಿ ದೇಸಾಯಿಯವರು ಇಂದು ಲೋಕಸಭೆಯಲ್ಲಿ ನಿರೂಪಿಸಿದರು.<br /> <br /> 1967–68ರ ತಾತ್ಕಾಲಿಕ ಆಯವ್ಯಯವನ್ನು ಮಂಡಿಸುತ್ತ ಅವರು ಪರಿಷ್ಕೃತ ಅಂದಾಜಿನಂತೆ ಪ್ರಸಕ್ತ ಹಣಕಾಸಿನ ವರ್ಷದಲ್ಲಿ 350 ಕೋಟಿ ರೂ.ಗಳ ಖೋತಾ ಆಗುವುದೆಂದು ತಿಳಿಸಿದರು.</p>.<p><strong>ರಾಜ್ಯಗಳಿಗೆ ಇನ್ನು ರಿಸರ್ವ್ ಬ್ಯಾಂಕ್ ಓವರ್ ಡ್ರಾಫ್ಟ್ ಇಲ್ಲ<br /> ನವದೆಹಲಿ, ಮಾ. 20–</strong> ‘ರಾಜ್ಯಗಳು ಅಧಿಕ ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ನಿಂದ ಪಡೆಯುತ್ತಿದ್ದ ಓವರ್ ಡ್ರಾಫ್ಟ್ಗಳ ಕಥೆ ಇನ್ನು ಮುಗಿದಂತೆಯೇ ಸರಿ’ ಎಂದು ಉಪ ಪ್ರಧಾನಿ ಹಾಗೂ ಅರ್ಥ ಸಚಿವ ಮುರಾರಜಿ ದೇಸಾಯಿಯವರು ಪಾರ್ಲಿಮೆಂಟ್ನಲ್ಲಿ 1967–68ರ ತಾತ್ಕಾಲಿಕ ಬಜೆಟ್ ಮಂಡಿಸುತ್ತಾ ತಿಳಿಸಿದರು.<br /> <br /> <strong>ಶುಕ್ರವಾರ ರಾಜ್ಯ ಬಜೆಟ್ ಮಂಡನೆ<br /> ಬೆಂಗಳೂರು, ಮಾ. 20– </strong>ರಾಜ್ಯದ ಮುಂದಿನ ಸಾಲಿನ ಬಜೆಟ್ಟನ್ನು ರಾಜ್ಯ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಶುಕ್ರವಾರದ ದಿನ ಮಂಡಿಸಲಾಗುವುದು. ಗುರುವಾರ ಮಂಡಿಸಲಾಗುವುದೆಂದು ಈ ಮೊದಲು ಪ್ರಕಟಿಸಲಾಗಿತ್ತು.<br /> <br /> <strong>28ರಂದು ಲೋಕಸಭೆಉಪಾಧ್ಯಕ್ಷರ ಆಯ್ಕೆ<br /> ನವದೆಹಲಿ, ಮಾ. 20–</strong> ಮಾರ್ಚಿ 28ರಂದು ಲೋಕಸಭೆಯ ಉಪಾಧ್ಯಕ್ಷರ ಆಯ್ಕೆಯಾಗಬೇಕೆಂದು ಸಭಾಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ನಿಗದಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇಶದ ತೀವ್ರ ಗಂಭೀರ ಆರ್ಥಿಕ ಪರಿಸ್ಥಿತಿ: ಮುರಾರಜಿ ನಿರೂಪಣೆ<br /> ನವದೆಹಲಿ, ಮಾ. 20–</strong> ರಫ್ತುಗಳು ಇಳಿಮುಖವಾಗುತ್ತಿರುವ, ವೆಚ್ಚವು ಹೆಚ್ಚಾಗುತ್ತಿರುವ ಮತ್ತು ಆಂತರಿಕ ಕೊರತೆಗಳು ಏಕಪ್ರಕಾರವಾಗಿರುವ ಗಂಭೀರ ಸ್ವರೂಪದ ಆರ್ಥಿಕ ಚಿತ್ರಣವನ್ನು ಉಪ ಪ್ರಧಾನಮಂತ್ರಿ ಮತ್ತು ಅರ್ಥ ಸಚಿವ ಶ್ರೀ ಮುರಾರಜಿ ದೇಸಾಯಿಯವರು ಇಂದು ಲೋಕಸಭೆಯಲ್ಲಿ ನಿರೂಪಿಸಿದರು.<br /> <br /> 1967–68ರ ತಾತ್ಕಾಲಿಕ ಆಯವ್ಯಯವನ್ನು ಮಂಡಿಸುತ್ತ ಅವರು ಪರಿಷ್ಕೃತ ಅಂದಾಜಿನಂತೆ ಪ್ರಸಕ್ತ ಹಣಕಾಸಿನ ವರ್ಷದಲ್ಲಿ 350 ಕೋಟಿ ರೂ.ಗಳ ಖೋತಾ ಆಗುವುದೆಂದು ತಿಳಿಸಿದರು.</p>.<p><strong>ರಾಜ್ಯಗಳಿಗೆ ಇನ್ನು ರಿಸರ್ವ್ ಬ್ಯಾಂಕ್ ಓವರ್ ಡ್ರಾಫ್ಟ್ ಇಲ್ಲ<br /> ನವದೆಹಲಿ, ಮಾ. 20–</strong> ‘ರಾಜ್ಯಗಳು ಅಧಿಕ ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ನಿಂದ ಪಡೆಯುತ್ತಿದ್ದ ಓವರ್ ಡ್ರಾಫ್ಟ್ಗಳ ಕಥೆ ಇನ್ನು ಮುಗಿದಂತೆಯೇ ಸರಿ’ ಎಂದು ಉಪ ಪ್ರಧಾನಿ ಹಾಗೂ ಅರ್ಥ ಸಚಿವ ಮುರಾರಜಿ ದೇಸಾಯಿಯವರು ಪಾರ್ಲಿಮೆಂಟ್ನಲ್ಲಿ 1967–68ರ ತಾತ್ಕಾಲಿಕ ಬಜೆಟ್ ಮಂಡಿಸುತ್ತಾ ತಿಳಿಸಿದರು.<br /> <br /> <strong>ಶುಕ್ರವಾರ ರಾಜ್ಯ ಬಜೆಟ್ ಮಂಡನೆ<br /> ಬೆಂಗಳೂರು, ಮಾ. 20– </strong>ರಾಜ್ಯದ ಮುಂದಿನ ಸಾಲಿನ ಬಜೆಟ್ಟನ್ನು ರಾಜ್ಯ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಶುಕ್ರವಾರದ ದಿನ ಮಂಡಿಸಲಾಗುವುದು. ಗುರುವಾರ ಮಂಡಿಸಲಾಗುವುದೆಂದು ಈ ಮೊದಲು ಪ್ರಕಟಿಸಲಾಗಿತ್ತು.<br /> <br /> <strong>28ರಂದು ಲೋಕಸಭೆಉಪಾಧ್ಯಕ್ಷರ ಆಯ್ಕೆ<br /> ನವದೆಹಲಿ, ಮಾ. 20–</strong> ಮಾರ್ಚಿ 28ರಂದು ಲೋಕಸಭೆಯ ಉಪಾಧ್ಯಕ್ಷರ ಆಯ್ಕೆಯಾಗಬೇಕೆಂದು ಸಭಾಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ನಿಗದಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>