<div> <strong>ಇಸ್ಲಾಮಾಬಾದ್:</strong> ಸಿಂಧೂನದಿ ಕುರಿತಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳ ಮಟ್ಟದ ಮಾತುಕತೆ ಸೋಮವಾರ ಆರಂಭವಾಗಿದೆ.<br /> <div> ಭಾರತದ ಪರವಾಗಿ ಸಿಂಧೂನದಿ ಸಮಿತಿ ಆಯುಕ್ತ ಪಿ.ಕೆ. ಸಕ್ಸೇನಾ ನೇತೃತ್ವದಲ್ಲಿ 10 ಸದಸ್ಯರು ಹಾಗೂ ಪಾಕಿಸ್ತಾನ ಕಡೆಯಿಂದ ಮಿರ್ಜಾ ಆಸಿಫ್ ಸಯೀದ್ ನೇತೃತ್ವದಲ್ಲಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. <br /> </div><div> ಸಿಂಧೂ ನದಿ ಪ್ರದೇಶದಲ್ಲಿ ಭಾರತ ನಿರ್ಮಿಸಲು ಉದ್ದೇಶಿಸಿರುವ ಮೂರು ಜಲವಿದ್ಯುತ್ ಸ್ಥಾವರಗಳ ಕುರಿತು ಸಭೆಯಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಿದೆ. <br /> </div><div> ಚೆನಾಬ್ ನದಿಗೆ 1ಸಾವಿರ ಮೆ.ವಾ. ಸಾಮರ್ಥ್ಯದ ಪಕುಲ್ ದುಲ್ ಸ್ಥಾವರ, ಚೆನಾಬ್ನ ಉಪನದಿಗಳಾಗಿರುವ ಮಿಯಾರ್ ನಲ್ಲಾ ನದಿಗೆ 120 ಮೆ.ವಾ. ಸಾಮರ್ಥ್ಯ ಹಾಗೂ ಕಲ್ನಾಯ್ ನದಿಗೆ 43 ಮೆ.ವಾ. ಸಾಮರ್ಥ್ಯದ ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. </div><div> </div><div> ಆದರೆ ಈ ಜಲವಿದ್ಯುತ್ ಸ್ಥಾವರಗಳ ನಿರ್ಮಾಣ 1960ರ ಸಿಂಧೂ ನದಿ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಪಾಕ್ ವಾದಿಸುತ್ತಿದೆ.<br /> <br /> <strong>ಜಮ್ಮು–ಕಾಶ್ಮೀರ, ಹಿಮಾಚಲದಲ್ಲಿ ನಿರ್ಮಾಣ:</strong> ಜಮ್ಮು ಮತ್ತು ಕಾಶ್ಮೀರದಲ್ಲಿ ಪಕುಲ್ ದುಲ್ ಹಾಗೂ ಕಲ್ನಾಯ್ ಜಲ ವಿದ್ಯುತ್ ಸ್ಥಾವರವನ್ನು ಕ್ರಮವಾಗಿ ₹7,464 ಕೋಟಿ ಹಾಗೂ ₹396 ಕೋಟಿ ವೆಚ್ಚದಲ್ಲಿ (2008ರ ಅಂದಾಜು) ನಿರ್ಮಿಸಲಾಗುತ್ತಿದೆ.</div><div> </div><div> ಹಿಮಾಚಲ ಪ್ರದೇಶದ ಲಹೌಲ್ ಸ್ಪಿಟಿ ಜಿಲ್ಲೆಯಲ್ಲಿ ಅಂದಾಜು ₹1,125 ಕೋಟಿ ವೆಚ್ಚದಲ್ಲಿ ಮಿಯಾರ್ ಸ್ಥಾವರ ನಿರ್ಮಿಸುವ ಯೋಜನೆ ಇದೆ. ಸಿಂಧೂ ನದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಾಕಿಸ್ತಾನದ ಜಲ ಸಂಪನ್ಮೂಲ ಮತ್ತು ವಿದ್ಯುತ್್ ಸಚಿವ ಖವಾಜಾ ಆಸಿಫ್್್ ತಿಳಿಸಿದ್ದಾಗಿ ಅಲ್ಲಿನ ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ. <br /> </div><div> ಈ ಹಿಂದೆ 2015ರಲ್ಲಿ ಉಭಯ ರಾಷ್ಟ್ರಗಳ ನಡುವೆ ಕೊನೆಯ ಬಾರಿಗೆ ಸಿಂಧೂ ನದಿ ಸಮಿತಿ ಸಭೆ ನಡೆದಿತ್ತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ನಡೆಸಿದ ಉರಿ ಭಯೋತ್ಪಾದಕ ದಾಳಿ ಕಾರಣಕ್ಕೆ 2016ರ ಸೆಪ್ಟೆಂಬರ್ನಲ್ಲಿ ಆಯೋಜಿಸಲಾಗಿದ್ದ ಸಭೆ ರದ್ದಾಗಿತ್ತು.</div><div> </div><div> <strong>ಶಾಂತಿ ಮಾತುಕತೆಗೆ ಚಾಲನೆ</strong><br /> ಸಿಂಧೂ ನದಿ ಸಮಿತಿ ಸಭೆಯಿಂದ ಭಾರತ–ಪಾಕಿಸ್ತಾನ ನಡುವೆ ನಿಂತುಹೋಗಿರುವ ಶಾಂತಿ ಮಾತುಕತೆಗೆ ಪುನಃ ಚಾಲನೆ ದೊರಕಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ.<br /> <br /> ಮಾತುಕತೆ ಪುನರಾರಂಭಕ್ಕೆ ಈ ಸಭೆ ಮೊದಲ ಹೆಜ್ಜೆಯಾಗಬಹುದು ಎಂದು ಡಾನ್ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಾಧ್ಯತೆಗಳನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.<br /> <br /> ಝೇಲಂ ಹಾಗೂ ಚೆನಾಬ್ ನದಿಗಳಿಗೆ ಕಿಶನ್ಗಂಗಾ ಹಾಗೂ ರ್ಯಾಟಲ್ ಜಲವಿದ್ಯುತ್ ಸ್ಥಾವರ ನಿರ್ಮಿಸುತ್ತಿರುವುದು ಸೇರಿದಂತೆ ಇತರೆ ವಿವಾದಗಳನ್ನು ಚರ್ಚಿಸಲು ಆಹ್ವಾನಿಸಿ ಪಿ.ಕೆ. ಸಕ್ಸೇನಾ ಅವರು ಪತ್ರ ಬರೆದಿರುವುದು ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.<br /> <br /> ಆದರೆ ಈ ವಿವಾದಗಳನ್ನು ಈಗಾಗಲೇ ವಿಶ್ವಬ್ಯಾಂಕ್ ಬಳಿ ಪ್ರಸ್ತಾಪಿಸಿರುವುದರಿಂದ ಚರ್ಚೆ ಪ್ರಸ್ತಾವನೆಯನ್ನು ನಿರಾಕರಿಸಲಾಗಿದೆ ಎಂದು ಪಾಕ್ ಹೇಳಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಇಸ್ಲಾಮಾಬಾದ್:</strong> ಸಿಂಧೂನದಿ ಕುರಿತಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳ ಮಟ್ಟದ ಮಾತುಕತೆ ಸೋಮವಾರ ಆರಂಭವಾಗಿದೆ.<br /> <div> ಭಾರತದ ಪರವಾಗಿ ಸಿಂಧೂನದಿ ಸಮಿತಿ ಆಯುಕ್ತ ಪಿ.ಕೆ. ಸಕ್ಸೇನಾ ನೇತೃತ್ವದಲ್ಲಿ 10 ಸದಸ್ಯರು ಹಾಗೂ ಪಾಕಿಸ್ತಾನ ಕಡೆಯಿಂದ ಮಿರ್ಜಾ ಆಸಿಫ್ ಸಯೀದ್ ನೇತೃತ್ವದಲ್ಲಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. <br /> </div><div> ಸಿಂಧೂ ನದಿ ಪ್ರದೇಶದಲ್ಲಿ ಭಾರತ ನಿರ್ಮಿಸಲು ಉದ್ದೇಶಿಸಿರುವ ಮೂರು ಜಲವಿದ್ಯುತ್ ಸ್ಥಾವರಗಳ ಕುರಿತು ಸಭೆಯಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಿದೆ. <br /> </div><div> ಚೆನಾಬ್ ನದಿಗೆ 1ಸಾವಿರ ಮೆ.ವಾ. ಸಾಮರ್ಥ್ಯದ ಪಕುಲ್ ದುಲ್ ಸ್ಥಾವರ, ಚೆನಾಬ್ನ ಉಪನದಿಗಳಾಗಿರುವ ಮಿಯಾರ್ ನಲ್ಲಾ ನದಿಗೆ 120 ಮೆ.ವಾ. ಸಾಮರ್ಥ್ಯ ಹಾಗೂ ಕಲ್ನಾಯ್ ನದಿಗೆ 43 ಮೆ.ವಾ. ಸಾಮರ್ಥ್ಯದ ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. </div><div> </div><div> ಆದರೆ ಈ ಜಲವಿದ್ಯುತ್ ಸ್ಥಾವರಗಳ ನಿರ್ಮಾಣ 1960ರ ಸಿಂಧೂ ನದಿ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಪಾಕ್ ವಾದಿಸುತ್ತಿದೆ.<br /> <br /> <strong>ಜಮ್ಮು–ಕಾಶ್ಮೀರ, ಹಿಮಾಚಲದಲ್ಲಿ ನಿರ್ಮಾಣ:</strong> ಜಮ್ಮು ಮತ್ತು ಕಾಶ್ಮೀರದಲ್ಲಿ ಪಕುಲ್ ದುಲ್ ಹಾಗೂ ಕಲ್ನಾಯ್ ಜಲ ವಿದ್ಯುತ್ ಸ್ಥಾವರವನ್ನು ಕ್ರಮವಾಗಿ ₹7,464 ಕೋಟಿ ಹಾಗೂ ₹396 ಕೋಟಿ ವೆಚ್ಚದಲ್ಲಿ (2008ರ ಅಂದಾಜು) ನಿರ್ಮಿಸಲಾಗುತ್ತಿದೆ.</div><div> </div><div> ಹಿಮಾಚಲ ಪ್ರದೇಶದ ಲಹೌಲ್ ಸ್ಪಿಟಿ ಜಿಲ್ಲೆಯಲ್ಲಿ ಅಂದಾಜು ₹1,125 ಕೋಟಿ ವೆಚ್ಚದಲ್ಲಿ ಮಿಯಾರ್ ಸ್ಥಾವರ ನಿರ್ಮಿಸುವ ಯೋಜನೆ ಇದೆ. ಸಿಂಧೂ ನದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಾಕಿಸ್ತಾನದ ಜಲ ಸಂಪನ್ಮೂಲ ಮತ್ತು ವಿದ್ಯುತ್್ ಸಚಿವ ಖವಾಜಾ ಆಸಿಫ್್್ ತಿಳಿಸಿದ್ದಾಗಿ ಅಲ್ಲಿನ ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ. <br /> </div><div> ಈ ಹಿಂದೆ 2015ರಲ್ಲಿ ಉಭಯ ರಾಷ್ಟ್ರಗಳ ನಡುವೆ ಕೊನೆಯ ಬಾರಿಗೆ ಸಿಂಧೂ ನದಿ ಸಮಿತಿ ಸಭೆ ನಡೆದಿತ್ತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ನಡೆಸಿದ ಉರಿ ಭಯೋತ್ಪಾದಕ ದಾಳಿ ಕಾರಣಕ್ಕೆ 2016ರ ಸೆಪ್ಟೆಂಬರ್ನಲ್ಲಿ ಆಯೋಜಿಸಲಾಗಿದ್ದ ಸಭೆ ರದ್ದಾಗಿತ್ತು.</div><div> </div><div> <strong>ಶಾಂತಿ ಮಾತುಕತೆಗೆ ಚಾಲನೆ</strong><br /> ಸಿಂಧೂ ನದಿ ಸಮಿತಿ ಸಭೆಯಿಂದ ಭಾರತ–ಪಾಕಿಸ್ತಾನ ನಡುವೆ ನಿಂತುಹೋಗಿರುವ ಶಾಂತಿ ಮಾತುಕತೆಗೆ ಪುನಃ ಚಾಲನೆ ದೊರಕಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ.<br /> <br /> ಮಾತುಕತೆ ಪುನರಾರಂಭಕ್ಕೆ ಈ ಸಭೆ ಮೊದಲ ಹೆಜ್ಜೆಯಾಗಬಹುದು ಎಂದು ಡಾನ್ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಾಧ್ಯತೆಗಳನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.<br /> <br /> ಝೇಲಂ ಹಾಗೂ ಚೆನಾಬ್ ನದಿಗಳಿಗೆ ಕಿಶನ್ಗಂಗಾ ಹಾಗೂ ರ್ಯಾಟಲ್ ಜಲವಿದ್ಯುತ್ ಸ್ಥಾವರ ನಿರ್ಮಿಸುತ್ತಿರುವುದು ಸೇರಿದಂತೆ ಇತರೆ ವಿವಾದಗಳನ್ನು ಚರ್ಚಿಸಲು ಆಹ್ವಾನಿಸಿ ಪಿ.ಕೆ. ಸಕ್ಸೇನಾ ಅವರು ಪತ್ರ ಬರೆದಿರುವುದು ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.<br /> <br /> ಆದರೆ ಈ ವಿವಾದಗಳನ್ನು ಈಗಾಗಲೇ ವಿಶ್ವಬ್ಯಾಂಕ್ ಬಳಿ ಪ್ರಸ್ತಾಪಿಸಿರುವುದರಿಂದ ಚರ್ಚೆ ಪ್ರಸ್ತಾವನೆಯನ್ನು ನಿರಾಕರಿಸಲಾಗಿದೆ ಎಂದು ಪಾಕ್ ಹೇಳಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>