ಸಹಾಯಧನ: ಅಪಘಾತದಲ್ಲಿ ಮೃತಪಟ್ಟ ತಾಲ್ಲೂಕಿನ ನಾಗಸಮುದ್ರದ ಮೂವರು, ಹುಚ್ಚಂಗಿದುರ್ಗದ ಮೂವರು, ಜಾಗೀರಬುಡ್ಡೇನಳ್ಳಿಯ ಮೂವರು ಹಾಗೂ ವಡೇರಹಳ್ಳಿಯ ಒಬ್ಬ ಬಾಲಕಿ ಸೇರಿದಂತೆ 10 ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ನಿಂದ ತಲಾ ₹ 5 ಸಾವಿರ ಸಹಾಯಧನವನ್ನು ಸೋಮವಾರ ವಿತರಿಸಲಾಯಿತು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯ ಮುಂಡ್ರಗಿ ನಾಗರಾಜ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ದಡಗೂಡು ಮಂಜುನಾಥ್, ಮುಖಂಡರಾದ ನಾಗಸಮುದ್ರ ಗೋವಿಂದಪ್ಪ, ಹೊನ್ನೂರಪ್ಪ, ಕೊಂಡಾ ಪುರ ಪರಮೇಶ್ವರಪ್ಪ, ಜಗದೀಶ್, ಅಡವಿ ಮಾರಯ್ಯ ಹಾಜರಿದ್ದರು.