ಗ್ರಾಮದ ಒಳ ರಸ್ತೆಗಳು ಅಭಿವೃದ್ಧಿ ಹೊಂದಿಲ್ಲ. ವರ್ಷಕ್ಕೊಮ್ಮೆ ಮರಂ ಹಾಕಲಾಗುತ್ತದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ನಿಂತು ಗಲೀಜು ವಾತಾವರಣ ನಿರ್ಮಾಣವಾಗಿದೆ. ಸ್ವಚ್ಛತೆ ಕಡೆ ಪಂಚಾಯಿತಿ ಆಡಳಿತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಹನುಮಂತ, ಸುರೇಶ, ಹುಲಗಮ್ಮ, ಗುಂಡಪ್ಪ, ಗಂಗಮ್ಮ, ಪಾರ್ವತಮ್ಮ, ಶಾಂತಮ್ಮ ಮತ್ತು ರಾಮಣ್ಣ, ಹೇಮಾದರಿ ಆರೋಪಿಸಿದರು.