<div> <strong>ಬೆಂಗಳೂರು:</strong> ‘ಚನ್ನರಾಯಪಟ್ಟಣದಲ್ಲಿ ಎಂಎಸ್ಐಎಲ್ (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಮದ್ಯದಂಗಡಿ ತೆರೆಯಬೇಕು’ ಎಂದು ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು. <br /> <div> ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಅವರು ಈ ಬೇಡಿಕೆ ಮಂಡಿಸಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜೋರಾಗಿ ನಕ್ಕರು. <br /> </div><div> ‘ಎಂಎಸ್ಐಎಲ್ ಮೂಲಕ ಸಿಎಲ್ 2 ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಇದೆ. ಇದಕ್ಕೆ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು ಕೇಳಿದ ಕಡೆಗಳಲ್ಲಿ ತೆರೆಯಲು ಸಿದ್ಧವಿದ್ದೇವೆ. ನಿಮ್ಮೂರಲ್ಲೂ ಆರಂಭಿಸುತ್ತೇವೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. <br /> </div><div> ‘ಮೂರು ವರ್ಷಗಳಲ್ಲಿ ಹೊರದೇಶಗಳಿಂದ 2.63 ಲಕ್ಷ ಪೆಟ್ಟಿಗೆ ಹಾಗೂ ಹೊರರಾಜ್ಯಗಳಿಂದ 1.10 ಕೋಟಿ ಪೆಟ್ಟಿಗೆ ಮದ್ಯ ತರಿಸಿಕೊಳ್ಳಲಾಗಿದೆ. ಹೊರದೇಶಗಳಿಗೆ 1.83 ಲಕ್ಷ ಪೆಟ್ಟಿಗೆ ಹಾಗೂ ಹೊರರಾಜ್ಯಗಳಿಗೆ 78.16 ಲಕ್ಷ ಪೆಟ್ಟಿಗೆ ಮದ್ಯ ಕಳುಹಿಸಲಾಗಿದೆ’ ಎಂದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಬೆಂಗಳೂರು:</strong> ‘ಚನ್ನರಾಯಪಟ್ಟಣದಲ್ಲಿ ಎಂಎಸ್ಐಎಲ್ (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಮದ್ಯದಂಗಡಿ ತೆರೆಯಬೇಕು’ ಎಂದು ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು. <br /> <div> ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಅವರು ಈ ಬೇಡಿಕೆ ಮಂಡಿಸಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜೋರಾಗಿ ನಕ್ಕರು. <br /> </div><div> ‘ಎಂಎಸ್ಐಎಲ್ ಮೂಲಕ ಸಿಎಲ್ 2 ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಇದೆ. ಇದಕ್ಕೆ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು ಕೇಳಿದ ಕಡೆಗಳಲ್ಲಿ ತೆರೆಯಲು ಸಿದ್ಧವಿದ್ದೇವೆ. ನಿಮ್ಮೂರಲ್ಲೂ ಆರಂಭಿಸುತ್ತೇವೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. <br /> </div><div> ‘ಮೂರು ವರ್ಷಗಳಲ್ಲಿ ಹೊರದೇಶಗಳಿಂದ 2.63 ಲಕ್ಷ ಪೆಟ್ಟಿಗೆ ಹಾಗೂ ಹೊರರಾಜ್ಯಗಳಿಂದ 1.10 ಕೋಟಿ ಪೆಟ್ಟಿಗೆ ಮದ್ಯ ತರಿಸಿಕೊಳ್ಳಲಾಗಿದೆ. ಹೊರದೇಶಗಳಿಗೆ 1.83 ಲಕ್ಷ ಪೆಟ್ಟಿಗೆ ಹಾಗೂ ಹೊರರಾಜ್ಯಗಳಿಗೆ 78.16 ಲಕ್ಷ ಪೆಟ್ಟಿಗೆ ಮದ್ಯ ಕಳುಹಿಸಲಾಗಿದೆ’ ಎಂದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>