ಇಲ್ಲಿನ ಸಾಯ್ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ಅವರು ಮಾತನಾಡಿದರು. ‘ಮುಂದಿನ ಒಲಿಂಪಿಕ್ಸ್ ತಯಾರಿ
ಗಾಗಿ ತಂಡದಲ್ಲಿ ಯುವ ಆಟಗಾರರಿಗೆ ಮನ್ನಣೆ ನೀಡಲಾಗುತ್ತಿದೆ. ಇದರಿಂದ ಸೀನಿಯರ್ ಆಟಗಾರರಲ್ಲಿ ಸ್ಥಾನ ಉಳಿಸಿ ಕೊಳ್ಳುವ ಸವಾಲು ಇದ್ದರೆ, ಜೂನಿಯರ್ಗಳಿಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಠಿಣ ಶ್ರಮ ಹಾಕುವ ಅಗತ್ಯ ಇದೆ’ ಎಂದು ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ.