<div> <strong>ಬೆಂಗಳೂರು: </strong>‘20 ವರ್ಷಗಳ ಹಿಂದೆ ಜೆ.ಪಿ.ನಗರ ಸಮೀಪದ ದೊರೆಸಾನಿಪಾಳ್ಯಕ್ಕೆ ಮೂವತ್ತಕ್ಕೂ ಹೆಚ್ಚು ಆನೆಗಳು ಆಗಾಗ ಬರುತ್ತಿದ್ದವು’ ಎಂಬ ಸ್ವಾರಸ್ಯಕರ ಸಂಗತಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕೆ.ಎಸ್.ಸುಗಾರ ಹೇಳಿದರು. <br /> <div> ಅರಣ್ಯ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> </div><div> ‘ವಸತಿ ಪ್ರದೇಶಕ್ಕೆ ಆನೆಗಳು ಬಂದರೇ ಇಂದು ದೊಡ್ಡ ಸುದ್ದಿಯಾಗುತ್ತದೆ. ಅಲ್ಲಿನ ಜನ ಆತಂಕಕ್ಕೆ ಒಳಗಾಗುತ್ತಾರೆ. ಹಿಂದೆ ದೊರೆಸಾನಿಪಾಳ್ಯಕ್ಕೆ ಆನೆಗಳು ಬರುತ್ತಿದ್ದವು. ಅವು ಮರಳಿ ಹೋಗಲು ನಗರದ ಅಂಚಿನಲ್ಲಿ ಅರಣ್ಯವಿತ್ತು. ಹಾಗಾಗಿ ಜನರಿಗೆ ತೊಂದರೆ ಅಗುತ್ತಿರಲಿಲ್ಲ’ ಎಂದರು.<br /> </div><div> ‘ಆಗ ನಗರದ ಸುತ್ತ ಅರಣ್ಯದ ಪ್ರಮಾಣ ಹೆಚ್ಚಿತ್ತು. ಈಗ ಅದರ ಪ್ರಮಾಣ ತುಂಬಾ ಕುಸಿದಿದೆ. ಇಲಾಖೆ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವನ ನಿರ್ಮಿಸುತ್ತೇವೆ’ ಎಂದು ತಿಳಿಸಿದರು.</div><div> </div><div> ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,‘ಅರಣ್ಯದ ಮಹತ್ವ ಕುರಿತು ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಬೇಕು. ಅರಣ್ಯವೆಂದರೆ ಮರಗಳು ಮತ್ತು ಪ್ರಾಣಿಗಳು ಇರುವ ಪ್ರದೇಶ ಹಾಗೂ ಚಾರಣ ಹೋಗುವ ತಾಣವೆಂದು ಕೆಲವರು ಭಾವಿಸಿದ್ದಾರೆ.</div><div> </div><div> ತಾಪಮಾನದ ಸಮತೋಲನದಲ್ಲಿ ಅರಣ್ಯಗಳ ಪಾತ್ರವೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೃಷಿಭೂಮಿ ವಿಸ್ತರಣೆ ಮತ್ತು ನಗರೀಕರಣದಿಂದ ಅರಣ್ಯ ನಾಶವಾಗುತ್ತಿದೆ. ಅದರಿಂದ ಮನಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ’ ಎಂದು ಹೇಳಿದರು.</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಬೆಂಗಳೂರು: </strong>‘20 ವರ್ಷಗಳ ಹಿಂದೆ ಜೆ.ಪಿ.ನಗರ ಸಮೀಪದ ದೊರೆಸಾನಿಪಾಳ್ಯಕ್ಕೆ ಮೂವತ್ತಕ್ಕೂ ಹೆಚ್ಚು ಆನೆಗಳು ಆಗಾಗ ಬರುತ್ತಿದ್ದವು’ ಎಂಬ ಸ್ವಾರಸ್ಯಕರ ಸಂಗತಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕೆ.ಎಸ್.ಸುಗಾರ ಹೇಳಿದರು. <br /> <div> ಅರಣ್ಯ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> </div><div> ‘ವಸತಿ ಪ್ರದೇಶಕ್ಕೆ ಆನೆಗಳು ಬಂದರೇ ಇಂದು ದೊಡ್ಡ ಸುದ್ದಿಯಾಗುತ್ತದೆ. ಅಲ್ಲಿನ ಜನ ಆತಂಕಕ್ಕೆ ಒಳಗಾಗುತ್ತಾರೆ. ಹಿಂದೆ ದೊರೆಸಾನಿಪಾಳ್ಯಕ್ಕೆ ಆನೆಗಳು ಬರುತ್ತಿದ್ದವು. ಅವು ಮರಳಿ ಹೋಗಲು ನಗರದ ಅಂಚಿನಲ್ಲಿ ಅರಣ್ಯವಿತ್ತು. ಹಾಗಾಗಿ ಜನರಿಗೆ ತೊಂದರೆ ಅಗುತ್ತಿರಲಿಲ್ಲ’ ಎಂದರು.<br /> </div><div> ‘ಆಗ ನಗರದ ಸುತ್ತ ಅರಣ್ಯದ ಪ್ರಮಾಣ ಹೆಚ್ಚಿತ್ತು. ಈಗ ಅದರ ಪ್ರಮಾಣ ತುಂಬಾ ಕುಸಿದಿದೆ. ಇಲಾಖೆ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವನ ನಿರ್ಮಿಸುತ್ತೇವೆ’ ಎಂದು ತಿಳಿಸಿದರು.</div><div> </div><div> ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,‘ಅರಣ್ಯದ ಮಹತ್ವ ಕುರಿತು ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಬೇಕು. ಅರಣ್ಯವೆಂದರೆ ಮರಗಳು ಮತ್ತು ಪ್ರಾಣಿಗಳು ಇರುವ ಪ್ರದೇಶ ಹಾಗೂ ಚಾರಣ ಹೋಗುವ ತಾಣವೆಂದು ಕೆಲವರು ಭಾವಿಸಿದ್ದಾರೆ.</div><div> </div><div> ತಾಪಮಾನದ ಸಮತೋಲನದಲ್ಲಿ ಅರಣ್ಯಗಳ ಪಾತ್ರವೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೃಷಿಭೂಮಿ ವಿಸ್ತರಣೆ ಮತ್ತು ನಗರೀಕರಣದಿಂದ ಅರಣ್ಯ ನಾಶವಾಗುತ್ತಿದೆ. ಅದರಿಂದ ಮನಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ’ ಎಂದು ಹೇಳಿದರು.</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>