<div> <strong>ಬೆಂಗಳೂರು:</strong> ಮಾವು ಪ್ರಿಯರಿಗೆ ಸಂತಸದ ಸುದ್ದಿ. ನಗರದ ಸುಮಾರು 35–40 ಸ್ಥಳಗಳಲ್ಲಿ ಈ ಬಾರಿ ‘ಮಾವು ಮಹಾಮೇಳ’ ಆಯೋಜಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಸಿದ್ಧತೆ ನಡೆಸಿದೆ. <br /> <div> ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ‘ಹಿಂದೆಲ್ಲಾ, ನಗರದ ಒಂದು ಸ್ಥಳದಲ್ಲಿ ಮಾತ್ರ ವಾರ್ಷಿಕವಾಗಿ ಮಾವು ಮೇಳ ನಡೆಸಲಾಗುತ್ತಿತ್ತು.</div><div> <br /> ದೂರ, ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಯಿಂದ ಮೇಳಕ್ಕೆ ಬರಲು ನಗರದ ಬೇರೆ ಬೇರೆ ಭಾಗದ ಜನರು ಹಿಂದೇಟು ಹಾಕುತ್ತಿದ್ದರು. ಜನರ ಸಮಸ್ಯೆ ಅರಿತು, ನಗರದ ಹೆಚ್ಚು ಸ್ಥಳಗಳಲ್ಲಿ ಮೇಳ ಆಯೋಜಿಸಲು ಮುಂದಾಗಿದ್ದೇವೆ’ ಎಂದರು.</div><div> </div><div> ‘ಬಿಬಿಎಂಪಿ ಸಹಯೋಗದಲ್ಲಿ ಮೇಳ ಆಯೋಜನೆಗೆ ಸ್ಥಳಗಳ ಗುರುತಿಸುವ ಕಾರ್ಯ ನಡೆಯುತ್ತಿದೆ. ಪ್ರಮುಖ ಅಪಾರ್ಟ್ಮೆಂಟ್ಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ವಾಹನಗಳ ಮೂಲಕ ಮಾವು ಮಾರಾಟ (ಸಂಚಾರಿ ಮಾವು ಮಾರುಕಟ್ಟೆ) ಮಾಡಲಾಗುತ್ತದೆ’ ಎಂದರು. <br /> </div><div> ‘ನೇರ ಮಾರುಕಟ್ಟೆ ಉತ್ತೇಜಿಸಲು ಮಾವು ಬೆಳೆಗಾರರಿಗೆ ಮಾತ್ರ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಇಲ್ಲಿ ಸಹಜವಾಗಿ ಮಾಗಿಸಿದ ಹಾಗೂ ಇಥಲೀನ್ ಮೂಲಕ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ’ ಎಂದು ಹೇಳಿದರು. <br /> </div><div> ‘ರಾಜ್ಯದಲ್ಲಿ 2 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾವು ಬೆಳೆಯುತ್ತಿದ್ದು, ಈ ವರ್ಷ 12–14 ಲಕ್ಷ ಟನ್ ಇಳುವರಿ ದೊರೆಯುವ ನಿರೀಕ್ಷೆ ಇದೆ. ನೀರಿನ ಟ್ಯಾಂಕರ್ ಖರೀದಿಸಲು ಇತರೆ ವರ್ಗದ ಮಾವು ಬೆಳೆಗಾರರಿಗೆ ₹ 50 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ₹ 90 ಸಾವಿರ ಸಹಾಯಧನ ನೀಡಲಾಗುವುದು’ ಎಂದು ತಿಳಿಸಿದರು. <br /> </div><div> <strong>ಹತ್ತು ಸಾವಿರ ಟನ್ ಮಾವು ರಫ್ತು ಗುರಿ: </strong>‘ಕಳೆದ ವರ್ಷ 6,750 ಟನ್ ಮಾವನ್ನು ವಿದೇಶಕ್ಕೆ ರಫ್ತು ಮಾಡಲಾಗಿದ್ದು, ಈ ಬಾರಿ ಹತ್ತು ಸಾವಿರ ಟನ್ ಮಾವು ರಫ್ತು ಮಾಡುವ ಗುರಿಯಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಹೇಳಿದರು.<br /> </div><div> ‘ಈಗಾಗಲೇ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಪುರ, ಚೀನಾ ಹಾಗೂ ಯುರೋಪ್ ರಾಷ್ಟ್ರಗಳಿಂದ ಮಾವು ಪೂರೈಕೆಗೆ ಬೇಡಿಕೆ ಬಂದಿದೆ. ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಅಲ್ಫಾನ್ಸೊ ಹಣ್ಣಿನ ಇಳುವರಿಯು ಅಕಾಲಿಕ ಮಳೆಯಿಂದಾಗಿ ಈ ವರ್ಷ ಕಡಿಮೆಯಾಗಿದೆ’ ಎಂದರು. <br /> </div><div> ಸ್ಥಳೀಯ ಮಾರುಕಟ್ಟೆಗೆ ಉತ್ತೇಜನ: ‘ಸ್ಥಳೀಯ ಮಾರುಕಟ್ಟೆ ಉತ್ತೇಜಿಸಲು ಮಾವು ನಿಗಮವು ವಿವಿಧ ಜಿಲ್ಲೆಗಳಲ್ಲಿ ಹಾಗೂ ಲಾಲ್ಬಾಗ್ನಲ್ಲಿ ರಾಜ್ಯ ಮಟ್ಟದ ಮಾವು ಮೇಳಗಳನ್ನು ಆಯೋಜಿಸಿ, ನೇರ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ಕದಿರೇಗೌಡ ಹೇಳಿದರು. <br /> </div><div> ‘ಮಾರ್ಚ್ 24 ರಂದು ಹೆಬ್ಬಾಳದಲ್ಲಿ ಮಾವು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳೆಗಾರರಿಂದ ಮೇಳದ ಆಯೋಜನೆಗೆ ಸಲಹೆಗಳನ್ನು ಪಡೆಯುತ್ತೇವೆ.<br /> <br /> 2016ರಲ್ಲಿ 10 ಮಂದಿ ರೈತರು ಆನ್ಲೈನ್ನ ಮೂಲಕ ಮಾವು ಮಾರಾಟ ಮಾಡಲು ಮುಂದೆ ಬಂದಿದ್ದರು. ಇದೇ ರೀತಿ ಈ ಬಾರಿ ರೈತರು ಮುಂದೆ ಬಂದರೆ ನಿಗಮದ ವತಿಯಿಂದ ಅವಕಾಶ ಒದಗಿಸಲಾಗುವುದು’ ಎಂದು ಹೇಳಿದರು.</div><div> </div><div> <strong>ಲಭ್ಯವಾಗಲಿರುವ ಹಣ್ಣುಗಳು</strong><br /> ಬಾದಾಮಿ (ಅಲ್ಫಾನ್ಸೊ), ರಸಪುರಿ, ನೀಲಂ, ರಾಜಗೀರ, ರಸಾಲು, ತೋತಾಪುರಿ, ಮಲ್ಲಿಕಾ, ಬೇನಿಷಾ, ಆಪೂಸ್, ಮಲಗೋವಾ, ಸಕ್ಕರೆಗುತ್ತಿ ತಳಿಯ ಮಾವಿನ ಹಣ್ಣುಗಳ ರುಚಿಯನ್ನು ಸವಿಯಬಹುದು.</div><div> </div><div> <strong>ಮೆಟ್ರೊ ನಿಲ್ದಾಣದಲ್ಲೂ ಮಾವು ಮೇಳ</strong><br /> ವಿಧಾನ ಸೌಧ, ಎಂ.ಜಿ. ರಸ್ತೆ, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆ, ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳಲ್ಲಿ ಮಾವು ಮೇಳ ನಡೆಸಲು ನಿಗಮ ಉದ್ದೇಶಿದೆ.<br /> <br /> ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್, ಬಿನ್ನಿಮಿಲ್,ಕೋರಮಂಗಲ, ಕೆಂಗೇರಿ ರಾಜ್ಯ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಹಾಗೂ ಇನ್ಫೋಸಿಸ್ನಲ್ಲಿ ಮೇಳ ನಡೆಸಲು ಉದ್ದೇಶಿಸಲಾಗಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಬೆಂಗಳೂರು:</strong> ಮಾವು ಪ್ರಿಯರಿಗೆ ಸಂತಸದ ಸುದ್ದಿ. ನಗರದ ಸುಮಾರು 35–40 ಸ್ಥಳಗಳಲ್ಲಿ ಈ ಬಾರಿ ‘ಮಾವು ಮಹಾಮೇಳ’ ಆಯೋಜಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಸಿದ್ಧತೆ ನಡೆಸಿದೆ. <br /> <div> ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ‘ಹಿಂದೆಲ್ಲಾ, ನಗರದ ಒಂದು ಸ್ಥಳದಲ್ಲಿ ಮಾತ್ರ ವಾರ್ಷಿಕವಾಗಿ ಮಾವು ಮೇಳ ನಡೆಸಲಾಗುತ್ತಿತ್ತು.</div><div> <br /> ದೂರ, ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಯಿಂದ ಮೇಳಕ್ಕೆ ಬರಲು ನಗರದ ಬೇರೆ ಬೇರೆ ಭಾಗದ ಜನರು ಹಿಂದೇಟು ಹಾಕುತ್ತಿದ್ದರು. ಜನರ ಸಮಸ್ಯೆ ಅರಿತು, ನಗರದ ಹೆಚ್ಚು ಸ್ಥಳಗಳಲ್ಲಿ ಮೇಳ ಆಯೋಜಿಸಲು ಮುಂದಾಗಿದ್ದೇವೆ’ ಎಂದರು.</div><div> </div><div> ‘ಬಿಬಿಎಂಪಿ ಸಹಯೋಗದಲ್ಲಿ ಮೇಳ ಆಯೋಜನೆಗೆ ಸ್ಥಳಗಳ ಗುರುತಿಸುವ ಕಾರ್ಯ ನಡೆಯುತ್ತಿದೆ. ಪ್ರಮುಖ ಅಪಾರ್ಟ್ಮೆಂಟ್ಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ವಾಹನಗಳ ಮೂಲಕ ಮಾವು ಮಾರಾಟ (ಸಂಚಾರಿ ಮಾವು ಮಾರುಕಟ್ಟೆ) ಮಾಡಲಾಗುತ್ತದೆ’ ಎಂದರು. <br /> </div><div> ‘ನೇರ ಮಾರುಕಟ್ಟೆ ಉತ್ತೇಜಿಸಲು ಮಾವು ಬೆಳೆಗಾರರಿಗೆ ಮಾತ್ರ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಇಲ್ಲಿ ಸಹಜವಾಗಿ ಮಾಗಿಸಿದ ಹಾಗೂ ಇಥಲೀನ್ ಮೂಲಕ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ’ ಎಂದು ಹೇಳಿದರು. <br /> </div><div> ‘ರಾಜ್ಯದಲ್ಲಿ 2 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾವು ಬೆಳೆಯುತ್ತಿದ್ದು, ಈ ವರ್ಷ 12–14 ಲಕ್ಷ ಟನ್ ಇಳುವರಿ ದೊರೆಯುವ ನಿರೀಕ್ಷೆ ಇದೆ. ನೀರಿನ ಟ್ಯಾಂಕರ್ ಖರೀದಿಸಲು ಇತರೆ ವರ್ಗದ ಮಾವು ಬೆಳೆಗಾರರಿಗೆ ₹ 50 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ₹ 90 ಸಾವಿರ ಸಹಾಯಧನ ನೀಡಲಾಗುವುದು’ ಎಂದು ತಿಳಿಸಿದರು. <br /> </div><div> <strong>ಹತ್ತು ಸಾವಿರ ಟನ್ ಮಾವು ರಫ್ತು ಗುರಿ: </strong>‘ಕಳೆದ ವರ್ಷ 6,750 ಟನ್ ಮಾವನ್ನು ವಿದೇಶಕ್ಕೆ ರಫ್ತು ಮಾಡಲಾಗಿದ್ದು, ಈ ಬಾರಿ ಹತ್ತು ಸಾವಿರ ಟನ್ ಮಾವು ರಫ್ತು ಮಾಡುವ ಗುರಿಯಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಹೇಳಿದರು.<br /> </div><div> ‘ಈಗಾಗಲೇ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಪುರ, ಚೀನಾ ಹಾಗೂ ಯುರೋಪ್ ರಾಷ್ಟ್ರಗಳಿಂದ ಮಾವು ಪೂರೈಕೆಗೆ ಬೇಡಿಕೆ ಬಂದಿದೆ. ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಅಲ್ಫಾನ್ಸೊ ಹಣ್ಣಿನ ಇಳುವರಿಯು ಅಕಾಲಿಕ ಮಳೆಯಿಂದಾಗಿ ಈ ವರ್ಷ ಕಡಿಮೆಯಾಗಿದೆ’ ಎಂದರು. <br /> </div><div> ಸ್ಥಳೀಯ ಮಾರುಕಟ್ಟೆಗೆ ಉತ್ತೇಜನ: ‘ಸ್ಥಳೀಯ ಮಾರುಕಟ್ಟೆ ಉತ್ತೇಜಿಸಲು ಮಾವು ನಿಗಮವು ವಿವಿಧ ಜಿಲ್ಲೆಗಳಲ್ಲಿ ಹಾಗೂ ಲಾಲ್ಬಾಗ್ನಲ್ಲಿ ರಾಜ್ಯ ಮಟ್ಟದ ಮಾವು ಮೇಳಗಳನ್ನು ಆಯೋಜಿಸಿ, ನೇರ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ಕದಿರೇಗೌಡ ಹೇಳಿದರು. <br /> </div><div> ‘ಮಾರ್ಚ್ 24 ರಂದು ಹೆಬ್ಬಾಳದಲ್ಲಿ ಮಾವು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳೆಗಾರರಿಂದ ಮೇಳದ ಆಯೋಜನೆಗೆ ಸಲಹೆಗಳನ್ನು ಪಡೆಯುತ್ತೇವೆ.<br /> <br /> 2016ರಲ್ಲಿ 10 ಮಂದಿ ರೈತರು ಆನ್ಲೈನ್ನ ಮೂಲಕ ಮಾವು ಮಾರಾಟ ಮಾಡಲು ಮುಂದೆ ಬಂದಿದ್ದರು. ಇದೇ ರೀತಿ ಈ ಬಾರಿ ರೈತರು ಮುಂದೆ ಬಂದರೆ ನಿಗಮದ ವತಿಯಿಂದ ಅವಕಾಶ ಒದಗಿಸಲಾಗುವುದು’ ಎಂದು ಹೇಳಿದರು.</div><div> </div><div> <strong>ಲಭ್ಯವಾಗಲಿರುವ ಹಣ್ಣುಗಳು</strong><br /> ಬಾದಾಮಿ (ಅಲ್ಫಾನ್ಸೊ), ರಸಪುರಿ, ನೀಲಂ, ರಾಜಗೀರ, ರಸಾಲು, ತೋತಾಪುರಿ, ಮಲ್ಲಿಕಾ, ಬೇನಿಷಾ, ಆಪೂಸ್, ಮಲಗೋವಾ, ಸಕ್ಕರೆಗುತ್ತಿ ತಳಿಯ ಮಾವಿನ ಹಣ್ಣುಗಳ ರುಚಿಯನ್ನು ಸವಿಯಬಹುದು.</div><div> </div><div> <strong>ಮೆಟ್ರೊ ನಿಲ್ದಾಣದಲ್ಲೂ ಮಾವು ಮೇಳ</strong><br /> ವಿಧಾನ ಸೌಧ, ಎಂ.ಜಿ. ರಸ್ತೆ, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆ, ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳಲ್ಲಿ ಮಾವು ಮೇಳ ನಡೆಸಲು ನಿಗಮ ಉದ್ದೇಶಿದೆ.<br /> <br /> ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್, ಬಿನ್ನಿಮಿಲ್,ಕೋರಮಂಗಲ, ಕೆಂಗೇರಿ ರಾಜ್ಯ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಹಾಗೂ ಇನ್ಫೋಸಿಸ್ನಲ್ಲಿ ಮೇಳ ನಡೆಸಲು ಉದ್ದೇಶಿಸಲಾಗಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>