ಶರಣರ ತತ್ವಗಳ ಪಾಲನೆ ಇಂದಿಗೂ ಅವಶ್ಯಕವಾಗಿದೆ. ಮೃಗೀಯ ಗುಣದಿಂದ ಆಗುವ ಅನಾಹುತಗಳನ್ನು ತಡೆಗಟ್ಟುವ ಶಕ್ತಿ ಶರಣರ ವಚನ ಗಳಿಗಿದ್ದು ವಿಶ್ವ ಮಾನ್ಯತೆ ಹೊಂದಿವೆ ಎಂದರು.
‘ಜಾತಿ, ಧರ್ಮ, ಅಂತಸ್ತು ಆಡಂಬರದ ಜೀವನದಲ್ಲಿ ಇಡೀ ಬದುಕನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ದಾರ ವಾದಂತೆ ಎಂದರು. ಜಿ.ಪಂ. ಮಾಜಿ ಸದಸ್ಯ ಕೆ.ಪರಶುರಾಮಪ್ಪ, ಎಂ.ವಿ.ಅಂಜಿನಪ್ಪ, ಅಬ್ದುಲ್ ರೆಹಮಾನ್, ಪಿಎಸ್ಐ ಎಚ್.ಪಿ.ಸತೀಶ್ ಮಾತನಾಡಿದರು.
ವೇದಿಕೆಯಲ್ಲಿ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಕಾನಾಮಡುಗು ಧರ್ಮಾಧಿಕಾರಿ ಐಮುಡಿ ಚರಣಾರರು, ಬೃಹನ್ಮಠದ ಹಾಲಸ್ವಾಮೀಜಿ, ಹಾವೇರಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ವೇದಿಕೆಯಲ್ಲಿ ಇದ್ದರು. ಮನೋಹರ್ ಕಾರ್ಯಕ್ರಮ ನಿರೂಪಿಸಿದರು.
ಜಮುರಾ ತಂಡದಿಂದ ‘ಮಹಾ ಪ್ರಸಾದಿ ಮಾದಾರ ಚನ್ನಯ್ಯ’ ಎಂಬ ನಾಟಕ ಪ್ರದರ್ಶನವಾಯಿತು.