ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಈ ಹಿಂದೆ ಅರ್ಜಿಗಳ ಕ್ಷಿಪ್ರ ವಿಲೇವಾರಿಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದ ಬಳಿಕ ಅರ್ಜಿಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸ ಲಾಗಿತ್ತು. ಅವು ಈವರೆಗೆ ಕ್ರಮ ವಹಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದರು.
ಮುಖಂಡರಾದ ಯು. ದಾಸ ಭಂಡಾರಿ, ನಾಗರತ್ನ ನಾಡ, ಗಣೇಶ ಮೊಗವೀರ ಬೈಂದೂರು, ಪದ್ಮಾವತಿ, ಶ್ಯಾಮಲಾ ಇದ್ದರು.